News Karnataka Kannada
Saturday, May 04 2024
ಮಂಗಳೂರು

ಕೆಎಂಸಿ ಆಸ್ಪತ್ರೆ ಅತ್ತಾವರದಲ್ಲಿ ೩೦ ಹಾಸಿಗೆಗಳ ನೂತನ ಫಿಸಿಕಲ್ ಮೆಡಿಸಿನ್ ಉದ್ಘಾಟನೆ

Inauguration of new 30-bed physical medicine, rehabilitation department at KMC Hospital Attavar
Photo Credit : News Kannada

ಮಂಗಳೂರು: ಕೆಎಂಸಿ ಆಸ್ಪತ್ರೆ ತನ್ನ ಅತ್ಯಾಧುನಿಕ ಸೌಕರ್ಯಗಳನ್ನು ಒಳಗೊಂಡ ಪಿ ಎಂ ರ್ (ಶಾರೀರಿಕ ಔಷದಿ ಹಾಗೂ ಪುನರ್ವಸತಿ ) ವಿಭಾಗವನ್ನು ವಿನಾಯಕ ರಾವ್, ಸಂಸ್ಥಾಪಕ, ಸೇವಾಧಾಮ ಪುನರ್ವಸತಿ ಕೇಂದ್ರ ಸೌತಡ್ಕ ಇವರು ಇಂದು (ಅ.5)ಕೆ ಎಂಸಿ ಆಸ್ಪತ್ರೆ ಅತ್ತಾವರದಲ್ಲಿ ಉದ್ಘಾಟಿಸಿದರು.

ಬೆನ್ನು ಹುರಿ / ಮೂಳೆಯ ಗಾಯ, ಮೆದುಳಿನ ಗಾಯ / ಆಘಾತ , ಪಾರ್ಶ್ವ ವಾಯು ಸೆರೆಬ್ರಲ್ ಪಾಲ್ಸಿ, ಕೈಕಾಲು ಅಂಗಛೇದ ಇತರ ದೈಹಿಕ ಮತ್ತು ಕಿಯಾತ್ಮಕ ತೊಂದರೆಗಳನ್ನು ಎದುರಿಸುತ್ತಿರುವ ವ್ಯಕ್ತಿಗಳ ಜೀವನದ ಗುಣಮಟ್ಟವನ್ನು ಹಾಗು ಆರೋಗ್ಯವನ್ನು ಸುಧಾರಿಸಲು ಗಮನ ಹರಿಸುವುದು ಹಾಗು ರೋಗಿಗಳಿಗೆ ಸಮಗ್ರ ಪುನರ್ವಸತಿ ಚಿಕಿತ್ಸೆ ಒದಗಿಸಿ ಅವರಲ್ಲಿ ಆತ್ಮಸ್ಟೈರ್ಯ ಹಾಗು ಅವರ ಆರೋಗ್ಯವನ್ನು ಪುನಃ ಪಡೆಯಲು ಸಹಾಯ ಮಾಡುವುದಕ್ಕಾಗಿ ಈ ಹೊಸ ವಿಭಾಗವನ್ನು ಸಮರ್ಪಿಸಲಾಗಿದೆ.

ಈ ಪಿ ಎಂ ರ್ ಕೇಂದ್ರ 30 ಹಾಸಿಗೆಗಳ ವಿಶೇಷ – ಸೌಲಭ್ಯವನ್ನು ಒಳಗೊಂಡ ಕೇಂದ್ರವಾಗಿದ್ದು ಇಲ್ಲಿ ಒಂದೇ ಸೂರಿನಡಿ ಪಿ ಎಂ ರ್ ವೈದ್ಯರು, ಫಿಸಿಯೋಥೆರಪಿಸ್ಟ್ , ಸ್ಪೀಚ್ ಥೆರಪಿಸ್ಟ್, ಮನೋರೋಗತಜ್ಞರು ಹಾಗು ಆಹಾರ ಪಥ್ಯ ಸಲಹೆಗಾರರನ್ನು ಒಳಗೊಂಡಿರುವ ದಕ್ಷಿಣ ಕನ್ನಡ ಜಿಲ್ಲೆ ಮೊದಲನೆಯ ಹಾಗು ಏಕೈಕ ಆರೋಗ್ಯ ಕೇಂದ್ರ ಇದಾಗಿದೆ.

ಈ ಕಾರ್ಯಕ್ರಮದ ಉದ್ಘಾಟಕರಾದ ಗೌರವಾನ್ವಿತ ವಿನಾಯಕ ರಾವ್, ರಿಬ್ಬನ್ ಕತ್ತರಿಸುವ ಮೂಲಕ ಈ ವಿಭಾಗವನ್ನು ಉದ್ಘಾಟಿಸುತ್ತ ಪಿ ಎಂ ರ್ ವಿಭಾಗವನ್ನು ಪ್ರಾರಂಭಿಸುವಲ್ಲಿ ಕೆ ಎಂ ಸಿ ಆಸ್ಪತ್ರೆ ಅತ್ತಾವರದ ಪ್ರಯತ್ನಗಳನ್ನು ಶ್ಲ್ಯಾಘಿಸಿದರು. ಅವರು ಮಾತನಾಡುತ್ತ ಈ ವಿಭಾಗವವು ವಿಶೇಶವಾಗಿ ರೋಗಿಗಳಿಗೆ ಸಾರ್ವಜನಿಕ ಜಾಗ್ರತಿ ಮತ್ತು ಬೆಂಬಲವನ್ನು ಹೆಚ್ಚಿಸುವ ಮಹತ್ವವನ್ನು ಒತ್ತಿ ಹೇಳಿದರು.

ಪಿ ಎಂ ರ್ ವಿಭಾಗದ ಮುಖ್ಯಸ್ಥರಾದ ಡಾ.ಆನ್ ಮೇರಿ ಜಾನ್ ಅವರು ಮಾತನಾಡುತ್ತ ಕೆ ಎಂ ಸಿ ಆಸ್ಪತ್ರೆ ಅತ್ತಾವರದಲ್ಲಿ ಈ ವಿಶೇಷ ವಿಭಾಗವನ್ನು ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ ಹಾಗು ರೋಗಿಗಳು ತಮ್ಮ ಸ್ವಾತಂತ್ರವನ್ನು ಮರಳಿ ಪಡೆಯಲು ಮತ್ತು ಅವರ ಜೀವನದ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.

ಮಣಿಪಾಲ ಅಕಾಡೆಮಿ ಆ ಹೈಯರ್ ಎಜುಕೇಷನ್ ಮಂಗಳೂರು ಕ್ಯಾಂಪಸ್ ನ ಪ್ರೊ. ವೈಸ್ ಚಾನ್ಸಲರ್ ಡಾ. ದಿಲೀಪ್ ಜಿ ನಾಯ್ಕ್ ಅವರು ಗೌರವಾನ್ವಿತ ಅತಿಥಿಯಾಗಿ, ಕಾರ್ಯಕ್ರಮಕ್ಕೆ ಹಾಗೂ ನೂತನ ವಿಭಾಗಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಕಸ್ತೂರ್ಬಾ ಮೆಡಿಕಲ್ ಕಾಲೇಜು ಮಂಗಳೂರು ಡೀನ್ ಡಾ. ಉನ್ನಿಕೃಷ್ಣನ್ , ಕೆಎಂಸಿ ಆಸ್ಪತ್ರೆ ಅತ್ತಾವರದ ವೈದ್ಯಕೀಯ ಅಧೀಕ್ಷಕರಾದ ಡಾ. ಜಾನ್ ರಾಮಪುರಂ , ಅಸೋಸಿಯೇಟ್ ಡೀನ್ ಗಳು, ಎಲ್ಲ ವಿಭಾಗದ ಮುಖ್ಯಸ್ಥರು, ವೈದ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು. ವೈದ್ಯರಾದ ಡಾ. ವಿಹಾರ್ ಜೋಶಿ ಕಾರ್ಯಕ್ರಮ ನಿರೂಪಿಸಿ, ಫಿಸಿಕಲ್ ಮೆಡಿಸಿನ್ ವಿಭಾಗದ ವೈದ್ಯರಾದ ಡಾ.ಗೌರವ್ ಗೋಮ್ಜ್ ಧನ್ಯವಾದ ಸಮರ್ಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು