ಕುಂದಾಪುರ:ವಿಶ್ವ ಪ್ರಸಿದ್ಧ ತ್ರಾಸಿ- ಮರವಂತೆ ಕಡಲ ತೀರದ ಸಮೀಪ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಸಂಜೆ ಪತಂಗಳ ರಾಶಿ ಕಂಡು ಬಂದಿದೆ, ವಾಹನ ಸವಾರರಿಗೆ ತೊಂದರೆ ಆಗಿದ್ದರು ಪತಂಗ ಪ್ರೇಮಿಗಳಿಗೆ ಕಣ್ಣಿಗೆ ಹಬ್ಬ ನೀಡಿದೆ.
ಮೊದಲ ಮಳೆಗೆ ಪತಂಗಗಳು ಮಣ್ಣಿನಿಂದ ಏಳುತ್ತವೆ ಇದೊಂದು ಪ್ರಕೃತಿ ಸಹಜ ಕ್ರಿಯೆ ಆಗಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಪತಂಗಗಳ ಹಾರಾಟ ಕಂಡು ಬಂದಿದೆ. ಪ್ರವಾಸಿಗರಂತು ತಮ್ಮ ಮೊಬೈಲ್ ನಲ್ಲಿ ಪತಂಗಗಳ ಹಾರಾಟವನ್ನು ವಿಡಿಯೋ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟು ಖುಷಿಪಟ್ಟರು.
ಛಾಯಾಗ್ರಹಕ ರವೀಂದ್ರ ಪೂಜಾರಿ ಮಾತನಾಡಿ ಚಲಿಸುತ್ತಿದ್ದ ವಾಹನಗಳಿಗೆ ಬಡಿಯುತ್ತಿದ್ದ ಪತಂಗಗಳು ಸಾವನ್ನಪ್ಪುತ್ತಿರುವುದು ನೋವಿನ ಸಂಗತಿ ಆಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.