ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಡಾ. ಶಿವರಾಮ ಕಾರಂತ ಸಭಾಭವನದಲ್ಲಿ “ನಡತೆ
ಬೆಳೆಸಿಕೊಳ್ಳುವಿಕೆ ಮತ್ತು ಸಾಮಾಜಿಕ ಜವಾಬ್ದಾರಿ” ಕುರಿತು ಉಪನ್ಯಾಸದೊಂದಿಗೆ ಸಂಸ್ಥಾಪನಾ ದಿನವನ್ನು ಶನಿವಾರ
ಆಚರಿಸಲಾಯಿತು.
ಸಂಪನ್ಮೂಲ ವ್ಯಕ್ತಿ, ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ನ ಎಂಬಿಎ ವಿಭಾಗದ ಸಹಾಯಕ ಪ್ರಾಧ್ಯಾಪಕ
ಮಂಜುನಾಥ ಕಾಮತ್ ಎಂ ಅವರು ತಮ್ಮ ಉಪನ್ಯಾಸದಲ್ಲಿ, ವಿದ್ಯಾರ್ಥಿಗಳು ತಮ್ಮನ್ನು ತಾವು ಅರಿತುಕೊಂಡು, ಸಾಮಾಜಿಕ
ಜವಾಬ್ದಾರಿ ಹೊಂದಿರಬೇಕು. ಸೃಜನಶೀಲರಾಗಿರುವುದಲ್ಲದೆ, ಬದುಕಿನ ನಾಗಾಲೋಟದಲ್ಲಿ ತಾವು ಪಡೆದದ್ದನ್ನು ಸಮಾಜಕ್ಕೆ
ಹಿಂದಿರುಗಿಸಬೇಕು, ಎಂದು ಹೇಳಿದರು.
ನೆಲ್ಯಾಡಿಯ ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಡಾ.ಜಯರಾಜ್ ಮಾತನಾಡಿ, ನಾವು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಕೈಜೋಡಿಸುವುದರ ಜೊತೆಗೆ ವಿಶ್ವವನ್ನು ಎದುರಿಸುವ ಕೌಶಲ್ಯವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕು, ಎಂದರು. ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಡಾ.ಸುಭಾಷಿಣಿ ಶ್ರೀವತ್ಸ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವಿಶ್ವವಿದ್ಯಾನಿಲಯದ ಸಂಧ್ಯಾ ಕಾಲೇಜೆಂಬ ಕನಸು ನನಸಾದ ಬಗೆಯನ್ನು ಮತ್ತು ಬಹುನಿರೀಕ್ಷಿತ ಉದ್ದೇಶಗಳ ಈಡೇರಿಕೆಗೆ ಕೆಲಸ ಮಾಡಿದ ಕೈಗಳನ್ನು ನೆನಪಿಸಿಕೊಂಡರು.
ಪತ್ರಿಕೋದ್ಯಮ ಉಪನ್ಯಾಸಕ ಸಚೇಂದ್ರ ಅತಿಥಿಗಳನ್ನು ಸ್ವಾಗತಿಸಿದರು. ತೃತೀಯ ಬಿ.ಕಾಂನ ಲಾವಣ್ಯ ಪ್ರಾರ್ಥಿಸಿದರು. ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಮಮತಾ ಕಾರ್ಯಕ್ರಮ ನಿರೂಪಿಸಿದರು. ಇಂಗ್ಲಿಷ್ ಉಪನ್ಯಾಸಕಿ ಜಾಯ್ಸ್ ವೆರೆಂದ್ರಿತಾ ಧನ್ಯವಾದ ಸಮರ್ಪಿಸಿದರು. ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.