News Karnataka Kannada
Saturday, May 04 2024
ಮಂಗಳೂರು

ಡಾ. ಬಿ.ಎಚ್ ಶ್ರೀಪತಿ ರಾವ್ ಚಿನ್ನದ ಪದಕ ಸನ್ಮಾನ ಕಾರ್ಯಕ್ರಮ

Dr. B. H Sripati Rao Gold Medal Award Programme
Photo Credit :

ಮಂಗಳೂರು: ಡಾ. ಬಿ. ಎಚ್ ಶ್ರೀಪತಿ ರಾವ್ ಚಿನ್ನದ ಪದಕ ಸನ್ಮಾನ ಕಾರ್ಯಕ್ರಮವು ಯೆನೆಪೋಯ ದಂತ ಕಾಲೇಜಿನ ಸಭಾಂಗಣದಲ್ಲಿ ಜೂನ್‌ 14ರಂದು ನಡೆಯಿತು. ಬಾಯಿ ಮತ್ತು ಮುಖಾಂಗ ಚಿಕಿತ್ಸಾ ವಿಭಾಗದಲ್ಲಿ ಉತ್ತಮ ಪ್ರತಿಭಾವಂತ ಸ್ನಾತಕೋತರ ದಂತ ವಿದ್ಯಾರ್ಥಿ ಪುರಸ್ಕಾರವನ್ನು ಡಾ. ಪ್ರಿಯಾಂಕಾ ಮಹಾಮುಂಕರ್ ಹಾಗೂ ಪದವಿ ದಂತ ವಿಭಾಗದಲ್ಲಿ ಡಾ. ಸುನೈನಾ. ಎಮ್ ಗೆ ನೀಡಿ ಸನ್ಮಾನಿಸಲಾಯಿತು.ಅಲ್ಲದೆ ದಂತ ಪದವಿ ವಿಭಾಗಗಳಲ್ಲಿ ಅತ್ಯುನ್ನತ ಶ್ರೇಣಿ ಪಡೆದವರನ್ನು ಸನ್ಮಾನಿಸಲಾಯಿತು.  ಯೆನೆಪೋಯ ದಂತ ಕಾಲೇಜು ಡೀನ್ ಡಾ. ಶಾಮ್.ಎಸ್. ಭಟ್ ಸ್ವಾಗತಿಸಿದರು.

ಬಾಯಿ ಮತ್ತು ಮುಖಾಂಗ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ. ಜಗದೀಶ್ಚಂದ್ರ ಸನ್ಮಾನ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಡಾ. ಎಮ್. ವಿಜಯಕುಮಾರ್, (ಕುಲಪತಿಗಳು, ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ), ಎಲ್ಲಾ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿದರು. ಡಾ. ಮಾಜಿ ಜೋಸ್,  (ಉಪ ಪ್ರಾಂಶುಪಾಲರು, ಯೆನೆಪೋಯ ದಂತ ಕಾಲೇಜು) ಪ್ರತಿಭಾನ್ವಿತ ವಿದ್ಯಾರ್ಥಿಗಳ ಹೆಸರನ್ನು ಪ್ರಕಟಿಸಿದರು. ಕಾರ್ಯಕ್ರಮದ  ಮುಖ್ಯ ಅತಿಥಿ ಡಾ. ಬಿ. ಎಚ್ ಶ್ರೀಪತಿ ರಾವ್ ಪುರಸ್ಕೃತರನ್ನು ನಿರಂತರ ಅಧ್ಯಯನದ ಮೂಲಕ ಗುರಿಯನ್ನು ಮುಟ್ಟಬೇಕು ಎಂದು ಹುರಿದುಂಬಿಸಿದರು. ಡಾ. ಲಕ್ಷ್ಮೀಕಾಂತ್ ಚಾತ್ರ, (ಪ್ರಾಂಶುಪಾಲರು ಯೆನೆಪೋಯ ದಂತ ಕಾಲೇಜು) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ. ಹಸನ್ ಸರ್ಫರಾಜ್ ( ಉಪ ಪ್ರಾಂಶುಪಾಲರು,ಯೆನೆಪೋಯ ದಂತ ಕಾಲೇಜು), ವಂದಿಸಿದರು. ಡಾ. ಗಂಗಾಧರ್ ಸೋಮಯಜಿ, (ಕುಲಸಚಿವರು, ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ), ಡಾ. ಅಖ್ತರ್ ಹುಸೇನ್, (ನಿರ್ದೇಶಕರು, ಸೆಂಟರ್ ಫಾರ್ ಕ್ರೇನಿಫೈಷಿಯಲ್ ಅನೋಮಲ್ಲಿಸ್) ಉಪಸ್ಥಿತರಿದ್ದರು. ಡಾ. ವರ್ಷ ಉಪಾದ್ಯ ಕಾರ್ಯಕ್ರಮ ನಿರೂಪಿಸಿದರು. ಹೆಚ್ಚಿನ ಸಂಖ್ಯೆ ಯಲ್ಲಿ ಅಧ್ಯಾಪಕರು, ಪೋಷಕರು  ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು