ಬೆಳ್ತಂಗಡಿ: ಬಿಜೆಪಿ ಯುವ ಮೋರ್ಚಾ ಹಾಗೂ ಮಂಡಲದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಬೆಳ್ತಂಗಡಿಯಲ್ಲಿ ಅ.24 ರಂದು ದೋಸೆ ಹಬ್ಬ ನಡೆಯಲಿದೆ.
ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಮುಂಜಾನೆ 9.15 ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು ಸಚಿವ ಸುನಿಲ್ ಕುಮಾರ್ ಪಾಲ್ಗೊಳ್ಳುವರು. ಬಳಿಕ ಪುತ್ತೂರು ಜಗದೀಶ್ ಆಚಾರ್ಯ ಅವರಿಂದ ಗಾನವೈಭವ, ಬೀಟ್ ರಾಕರ್ಸ್ ತಂಡದಿಂದ ನೃತ್ಯವೈಭವ ನಡೆಯಲಿದೆ. ತಾಲೂಕಿನ ಆಯ್ದ ಭಜನಾ ತಂಡದಿಂದ ಭಜನಾಕರ್ಯಕ್ರಮ ನಡೆಯಲಿದೆ.
ಸಂಜೆ ಗೋಪೂಜೆ ಹಾಗೂ ಸಮಾರೋಪ ಸಮಾರಂಭ ನಡೆಯಲಿದ್ದು ಬಳಿಕ ದೇವಿದಾಸ್ ಕಾಪಿಕಾಡ್ ಅವರ ನಾಯಿದ ಬೀಲ ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ. ದೋಸೆ ಹಬ್ಬ ಪ್ರಯುಕ್ತ ನಗರವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ.