News Karnataka Kannada
Wednesday, May 01 2024
ಮಂಗಳೂರು

ಅಮಿತ ಷಾ ̧ ನಿರ್ಮಲಾ ಸೀತಾರಾಮನ್ ರಾಜ್ಯದಲ್ಲಿ ಸುಳ್ಳು ಹೇಳಿದ್ದಾರೆ : ದಿನೇಶ್ ಗುಂಡೂರಾವ್ ಕಿಡಿ

ನಗರದಲ್ಲಿಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಇಂದು ಸುದ್ದಿಗೋಷ್ಠಿ ನಡೆಸಿ ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.
Photo Credit : NewsKarnataka

ಮಂಗಳೂರು: ನಗರದಲ್ಲಿಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಇಂದು ಸುದ್ದಿಗೋಷ್ಠಿ ನಡೆಸಿ ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.

ಅಮಿತ್ ಷಾ ಮತ್ತು ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ಬಂದು ಸುಳ್ಳು ಹೇಳಿದ್ದಾರೆ. ಫೈನಾನ್ಸ್ ಕಮೀಷನ್ ನಲ್ಲಿ ಹಣ ಕೊಟ್ಟಿರೋದಾಗಿ ನಿರ್ಮಲ ಸೀತಾರಾಮನ್ ಹೇಳಿದ್ದಾರೆ. ಅಮಿತ್ ಷಾ, ಬರ ಪರಿಹಾರ ವಿಚಾರದಲ್ಲಿ ಕರ್ನಾಟಕ ಸರಿಯಾದ ದಾಖಲೆ ಸಲ್ಲಿಸಿಲ್ಲ ಅಂತಾ ಹೇಳಿದ್ದಾರೆ. ಇದು ಶುದ್ಧವಾದ ಸುಳ್ಳು,ಕರ್ನಾಟಕ ಸಲ್ಲಿಸಿರುವ ವರದಿಗೆ ದಾಖಲೆಗಳಿವೆ. ಅಮಿತ್ ಷಾ ಒಬ್ಬ ಮಹಾನ್ ಸುಳ್ಳುಗಾರ. ಕನಿಷ್ಠ ಸಭೆ ಮಾಡಲೂ ಅವಕಾಶವನ್ನು ಅಮಿತ್ ಷಾ ನೀಡಿಲ್ಲ. ರಾಜ್ಯಕ್ಕೆ ಕೇಂದ್ರ ಸರ್ಕಾರ ನಯಾಪೈಸೆಯನ್ನು ಕೊಟ್ಟಿಲ್ಲ. ಈ ಅನ್ಯಾಯವನ್ನು ಹೇಳಲು ರಾಜ್ಯದ ಬಿಜೆಪಿ ಮುಖಂಡರಿಗೆ ಆಗಿಲ್ಲ.

ರಾಜ್ಯಕ್ಕೆ ಆದ ಅನ್ಯಾಯದ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಗೆ ಹೋಗಿದ್ದೇವೆ. ಅಮಿತ್ ಷಾ ಚನ್ನಪಟ್ಟಣ ದ ಭಾಷಣವನ್ನು ಕೋರ್ಟ್ ಗೆ ರಿಪ್ಲೈ ಆಗಿ ನೀಡಲಿ. ಮೋದಿ ಮತ್ತೊಂದು ದೊಡ್ಡ ಸುಳ್ಳುಗಾರ ಎಂದು ಕೇಂದ್ರ ಸರ್ಕಾರದ ವಿರುದ್ಧ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು