News Karnataka Kannada
Wednesday, May 01 2024
ಮಂಗಳೂರು

ದಲಿತ ಕುಟುಂಬದ ಮನೆ ನಿರ್ಮಾಣದ ಸಹಾಯಧನ ವಿಳಂಬ: ಬಿಡುಗಡೆಗೊಳಿಸಲು ಡಿಎಚ್ಎಸ್ ಒತ್ತಾಯ

Dalit family's house construction subsidy delayed: DHS demands release
Photo Credit : By Author

ಮಂಗಳೂರು: ದೇರೆಬೈಲ್ ಪಶ್ಚಿಮ ವಾರ್ಡಿನ ಉರ್ವಸ್ಟೋರ್ ಸುಂಕದಕಟ್ಟೆಯ ದಲಿತ ಕುಟುಂಬದ ಮನೆ ನಿರ್ಮಾಣದ ಸಹಾಯಧನ ತೀರಾ ವಿಳಂಬವಾಗಿದ್ದು, ಅದನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ದಲಿತ ಹಕ್ಕುಗಳ ಸಮಿತಿ( ಡಿಎಚ್ಎಸ್ ) ಯ ಮಂಗಳೂರು ನಗರ ಸಮಿತಿಯು ಮನಪಾದ ಆಯುಕ್ತರು ಹಾಗೂ ಮೇಯರ್ ರವರಿಗೆ ಮನವಿ ಅರ್ಪಿಸುವ ಮೂಲಕ ಒತ್ತಾಯಿಸಿದೆ.

ಉರ್ವಸ್ಟೋರ್ ಸುಂಕದಕಟ್ಟೆ ಪ್ರದೇಶದ ನಿವಾಸಿ ಪದ್ಮ ಎಂಬ ದಲಿತ ಮಹಿಳೆಯ ಪಾಳುಬಿದ್ದ ಮನೆಯು ಕಳೆದ ವರ್ಷದ ಮಳೆಗಾಲದ ಸಮಯಕ್ಕೆ ಕುಸಿದು ಬಿದ್ದು,ಅದಾಗಲೇ ಮಾದ್ಯಮದ ಮೂಲಕ ದೊಡ್ಡ ಸುದ್ದಿಯಾಗಿತ್ತು. ಆ ಸಂದರ್ಭದಲ್ಲಿ ಮನಪಾ ಅಧಿಕಾರಿಗಳು ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಶೀಘ್ರದಲ್ಲಿ ಮನೆ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದ್ದರು. ಬಳಿಕ ಯಾವುದೇ ಸುದ್ದಿ ಇಲ್ಲದಾಗ ಸ್ಥಳೀಯರ ಸಹಕಾರದಲ್ಲಿ ನೂತನ ಮನೆ ನಿರ್ಮಿಸಲು ವ್ಯವಸ್ಥೆ ಮಾಡಲಾಗಿ ಮನಪಾದ ಪ್ರಾಕೃತಿಕ ವಿಕೋಪದ ನಿಧಿಯಿಂದ ಈಗಾಗಲೇ 2 ಬಾರಿ ಹಣ ಸಿಕ್ಕಿದ್ದು,3 ನೇ ಹಂತದ ಹಣಕ್ಕೆ ಸತಾಯಿಸಲಾಗುತ್ತಿದೆ. ಒಟ್ಟಿನಲ್ಲಿ ದಲಿತ ಸಮುದಾಯದ ಇಂತಹ ಗಂಭೀರ ಪ್ರಶ್ನೆಗಳು ಬಂದಾಗ ಕೂಡಲೇ ಸ್ಪಂದನೆ ಮಾಡುವ ಬದಲಾಗಿ ಅವರನ್ನು ಈ ನಮೂನೆ ಸತಾಯಿಸುವುದು ಸರಿಯೇ ? ಎಂದು ಡಿಎಚ್ಎಸ್ ಪ್ರಶ್ನಿಸಿದೆ.

ಮನವಿ ಸ್ವೀಕರಿಸಿದ ಮೇಯರ್ ಹಾಗೂ ಆಯುಕ್ತರು ಕೂಡಲೇ ಸ್ಪಂದಿಸುವ ಭರವಸೆ ನೀಡಿದರು. ನಿಯೋಗದಲ್ಲಿ ಡಿ ವೈ ಎಫ್ ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್,ಸಿ ಪಿ ಐ ಎಮ್ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್, ದಲಿತ ಹಕ್ಕುಗಳ ಸಮಿತಿ ಮುಖಂಡರಾದ ಪ್ರಶಾಂತ್ ಎಂ ಬಿ, ರಘುವೀರ್, ನಾಗೇಂದ್ರ, ಡಿ ವೈ ಎಫ್ ಐ ನಾಯಕರಾದ ಮನೋಜ್ ಕುಲಾಲ್, ಸುಕೇಶ್, ಪ್ರಶಾಂತ್ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
15229
Jaya Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು