ಬೆಳ್ತಂಗಡಿ: ರಾಜ್ಯದ ಕಾಂಗ್ರೇಸ್ ನಾಯಕ ಡಿ.ಕೆ.ಶಿವಕುಮಾರ್ ಶನಿವಾರ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಧರ್ಮಾಧಿಕಾರಿ ಡಾl ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾದರು. ಡಿಕೆಶಿ ಕುಟುಂಬ ಹೆಗ್ಗಡೆಯವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.
ಹೆಗ್ಗಡೆಯವರ ಕುಟುಂಬಸ್ಥರ ಜೊತೆಗೆ ಡಿಕೆಶಿ ಕುಟುಂಬ ಫೋಟೋ ತೆಗೆಸಿಕೊಂಡರು. ಆ ಬಳಿಕ ಹೆಗ್ಗಡೆ ನಿವಾಸದ ಒಳಗಿನ ಕೊಠಡಿಯಲ್ಲಿ ಮತ್ತೆ ಡಾl ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.