News Karnataka Kannada
Friday, May 17 2024
ಮಂಗಳೂರು

ಮತಾಂತರ ಕಾಯ್ದೆ ರದ್ದು ವಿರುದ್ಧ ದೊಡ್ಡಮಟ್ಟದಲ್ಲಿ ಹೋರಾಟ: ಕಲ್ಲಡ್ಕ ಎಚ್ಚರಿಕೆ

We will keep this country as a Hindu country, this is our resolve: Dr Prabhakar Bhat
Photo Credit : News Kannada

ಬಂಟ್ವಾಳ: ಮೋಸ, ಅಮಿಷ, ಬಲವಂತವಾಗಿ ಮತಾಂತರ ಮಾಡುವ ಕೃತ್ಯದಿಂದ ರಕ್ಷಿಸಲು ಈ ಹಿಂದಿನ ಸರಕಾರ ತಂದಿದ್ದ ಮತಾಂತರ ಕಾಯ್ದೆಯನ್ನು ರದ್ದುಗೊಳಿಸಲು ಮುಂದಾಗಿರುವ ಕಾಂಗ್ರೆಸ್ ಸರಕಾರದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಆರೆಸ್ಸೆಸ್ ಮುಖಂಡ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರು ಇದರ  ವಿರುದ್ಧ ಜನಮಾನಸದಿಂದ  ದೊಡ್ಡಮಟ್ಟದಲ್ಲಿ ಹೋರಾಟ ನಡೆಯಲಿದೆ ಎಂದು ಎಚ್ಚರಿಸಿದ್ದಾರೆ.

ಶುಕ್ರವಾರ ಬಿ.ಸಿ.ರೋಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದಿನ ಸರ್ಕಾರ ತಂದಿರುವ ಮತಾಂತರ ಕಾಯ್ದೆ ಕಾನೂನಿನಲ್ಲಿ ಮೋಸ , ವಂಚನೆಯ, ಬಲವಂತದ ಮತಾಂತರಕ್ಕೆ ಅವಕಾಶವಿರಲಿಲ್ಲ,ಆದರೆ ಸ್ವ ಇಚ್ಛೆಯಿಂದ ಜಿಲ್ಲಾಧಿಕಾರಿಯವರಿಗೆ ಅರ್ಜಿ ಹಾಕಿ ಸ್ಪಷ್ಟ ಕಾರಣ ನೀಡಿ ಮತಾಂತರವಾಗುವುದಕ್ಕೆ ಅಡ್ಡಿ ಇರಲಿಲ್ಲ ಎಂದು ತಿಳಿಸಿದರು.

ಮತಾಂತರ ಕದ್ದುಮುಚ್ಚಿ  ನಡೆಯಬಾರದು ಎನ್ನುವುದೂ ಸ್ಪಷ್ಟವಾಗಿತ್ತು, ಮತಾಂತರಕ್ಕೂ ಕಾನೂನಿನ ನಿಬಂಧನೆಗಳನ್ನೂ‌ನೀಡಲಾಗಿತ್ತು, ಆದರೆ ಈಗಿನ ಸರ್ಕಾರ ಯಾರನ್ನು ಓಲೈಸಲು ಮತಾಂತರ ನಿಷೇಧ ಕಾಯ್ದೆ ರದ್ದುಪಡಿಸುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ ಎಂದ ಡಾ.ಭಟ್ ಅವರು ಸರ್ಕಾರಗಳು ಬದಲಾದ ಹಾಗೆ ಹಿಂದಿನದು ಸರಿ ಇಲ್ಲವಾದರೆ ಬದಲಿಸುವುದು ಸಹಜ, ಅದಕ್ಕೆ ಸಂವಿಧಾನದಲ್ಲಿ ಅವಕಾಶವೂ ಇದೆ, ಆದರೆ  ಹಿಂದಿನ ಸರ್ಕಾರದ ಯಾವುದೂ ಕೂಡ ಸರಿ ಇಲ್ಲ ಎನ್ನುವ  ಈಗಿನ ಸರ್ಕಾರದ ಧೋರಣೆ ಸರಿ ಅಲ್ಲ ಎಂದು ಅವರು ತಿಳಿಸಿದರು

ನಗರ ಪ್ರದೇಶ ಮಾತ್ರವಲ್ಲ ಗ್ರಾಮೀಣ ಭಾಗದಲ್ಲು ವಿವಿಧ ಅಮಿಷ,ಬಲವಂತದ ಮತಾಂತರ ಅವ್ಯಾಹತವಾಗಿ ನಡೆಯುತಿತ್ತು.ಇದನ್ನು ತಡೆಯುವ ನಿಟ್ಟಿನಲ್ಲಿ ಹಿಂದಿನ ಸರಕಾರ ತಂದಿರುವ ಮತಾಂತರ ಕಾಯ್ದೆಯನ್ನು ಈಗಿನ ಸರಕಾರ ರದ್ದುಗೊಳಿಸುವ ಮೂಲಕ ಮೋಸ,ಅಮಿಷ, ಬಲವಂತದ ಮತಾಂತರಕ್ಕೆ ಮತ್ತೆ ಒಪ್ಪಿಗೆ ನೀಡುತ್ತದೆಯೇ ಎಂದು ಪ್ರಶ್ನಿಸಿರುವ ಡಾ.ಭಟ್ ಅವರು ಮತಾಂತರ ನಿಷೇಧ ಕಾಯ್ದೆ ರದ್ದುಪಡಿಸುವುದಕ್ಕೆ ತನ್ನ ವಿರೋಧ ಇದೆ ಎಂದರು.

ಹಿಂದೂ ಸಮಾಜ ಎಲ್ಲವನ್ನು ಸ್ವೀಕರಿಸುವ ಮತ್ತು ಒಪ್ಪಿಕೊಳ್ಳುವ ಸಮಾಜವಾಗಿದೆ.ಅವರವರ ಪದ್ದತಿಗನುಗುಣವಾಗಿ ನಡೆದುಕೊಳ್ಳುವುದಕ್ಕೆ ಯಾರು ಅಡ್ಡಿಪಡಿಸುವುದಾಗಲಿ,ವಿರೋಧವು ಇಲ್ಲ , ಆದರೆ ಮನೆ,ಮನೆ, ಮನ,ಮನಸ್ಸು ಒಡೆಯುವ ಕಾರ್ಯ ಅಗಬಾರದು ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು