ಮಂಗಳೂರು: ಮಾಜಿ ಪ್ರಧಾನಿ ಜವಹರಲಾಲ್ ನೆಹರು ಅವರ 59ನೇ ಪುಣ್ಯತಿಥಿ ಕಾರ್ಯಕ್ರಮ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತಾಡಿದ ಮನಪಾ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಜವಹರಲಾಲ್ ಲಾಲ್ ನೆಹರು ಅವರು ಪ್ರಧಾನಿಯಾಗಿದ್ದ ಕಾಲದಲ್ಲಿ ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಸಂಸದರಾಗಿದ್ದ ಶ್ರೀನಿವಾಸ ಮಲ್ಯ ಮಂಗಳೂರಿನಲ್ಲಿ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಎನ್.ಎಂ.ಪಿ.ಟಿ ಬಂದರು ಹಾಗೂ ಎನ್.ಐ.ಟಿ.ಕೆ ವಿದ್ಯಾಸಂಸ್ಥೆ ಸ್ಥಾಪನೆ ಸೇರಿದಂತೆ ಇನ್ನಿತರು ಸಂಸ್ಥೆಗಳನ್ನು ಜಿಲ್ಲೆಯಲ್ಲಿ ಸ್ಥಾಪನೆ ಮಾಡಲು ಪ್ರಮುಖ ಪಾತ್ರ ವಹಿಸಿದ್ದಾರೆ.
ನೆಹರೂ ಅವರು ಮಂಗಳೂರಿಗೆ ಬಂದ ಸಂದರ್ಭದಲ್ಲಿ ಮೈದಾನದಲ್ಲಿ ಭಾಷಣ ಮಾಡಿದ್ದ ಸ್ಮರಣಾರ್ಥವಾಗಿ ಆ ಮೈದಾನಕ್ಕೆ ನೆಹರೂ ಮೈದಾನ ಎಂದು ಹೆಸರಿಡಲಾಗಿತ್ತು, ಆದರೆ ಬಿಜೆಪಿಯು ನೆಹರೂ ಮೈದಾನ ಹೆಸರನ್ನು ತೆಗೆದು ಆ ಮೈದಾನವನ್ನು ಕೇಂದ್ರ ಮೈದಾನ ಹೆಸರಿಡಲು ಪ್ರಯತ್ನ ಪಟ್ಟಿತ್ತು, ಆದರೆ ಮನಪಾದ ಕಾಂಗ್ರೆಸ್ ಮೇಯರ್ ಗಳು ಇದನ್ನು ವಿರೋಧಿಸಿ ಮೈದಾನದಲ್ಲಿ ನೆಹರು ಪ್ರತಿಮೆಯನ್ನು ಪ್ರತಿಷ್ಠಾಪಿಸಿ ಸ್ವಾತಂತ್ರ್ಯ ಹೋರಾಟಗಾರ , ಭಾರತದ ಮಾಜಿ ಪ್ರಧಾನಿ ಗೌರವ ಸಲ್ಲಿಸಿದೆ ಎಂದು ನೆಹರು ಅವರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು
ಕಾರ್ಯಕ್ರಮದಲ್ಲಿ ಬಿ ಎಂ ಅಬ್ಬಾಸ್ ಅಲಿ, ರಮಾನಂದ ಪೂಜಾರಿ, ಟಿ ಹೊನ್ನಯ್ಯ, ಇಮ್ರಾನ್ ಎ ಆರ್, ಜೇಮ್ಸ್ ಶಿವಬಾಗ್, ಅನ್ಸಾರ್ ಸಾಲಿಮಾರ್, ಸಮರ್ಥ್ ಭಟ್, ನಜೀಬ್ ಮಂಚಿ, ಲಕ್ಷ್ಮಣ್ ಶೆಟ್ಟಿ, ರೋಬಿನ್ ಡಿ ಸೋಜಾ, ಯೋಗೀಶ್ ಕುಮಾರ್, ರಿತೇಶ್, ಯೋಗೀಶ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು,
ಟಿ ಕೆ ಸುಧೀರ್ ಸ್ವಾಗತಿಸಿದರು. ಶುಭೋದಯ ಆಳ್ವಾ ಕೊನೆಗೆ ವಂದಿಸಿದರು.