ಬಂಟ್ವಾಳ: ತಾಲೂಕಿನ ಪುಣಚ ಗ್ರಾಮದ ಮೂಡಂಬೈಲು ಸರ್ಕಾರಿ ಶಾಲೆಯ ಮಕ್ಕಳಿಗೆ ಗುರುವಾರ ಗದ್ದೆಗಿಳಿದು ನೇಜಿನೆಡುವ ಸಂಭ್ರಮ. ಶಾಲೆಯ 1 ನೇ ತರಗತಿಯಿಂದ 8 ನೇವತರಗತಿ ವರೆಗಿನ 37 ವಿದ್ಯಾರ್ಥಿಗಳೂ ಗದ್ದೆಗಿಳಿದು, ನೇಜಿನೆಟ್ಟು ಅನ್ನಬೆಳೆಯುವ ಶ್ರಮದ ಪಾಠವನ್ನು ಮಕ್ಕಳು ತಿಳಿದುಕೊಂಡದ್ದು ವಿಶೇಷವಾಗಿತ್ತು.
ಮೂಡಂಬೈಲು ಪಾವಲುಮೂಲೆಯ ಶಿವರಾಮ ನಾಯ್ಕ ಮತ್ತು ಮನೆಯವರ ಕುಟುಂಬದ ಸದಸ್ಯರೇ ಸೇರಿ ನೇಜಿ ನೆಟ್ಟು ಗದ್ದೆ ಕೃಷಿಮಾಡುವ ಶಿವರಾಮ ನಾಯ್ಕರ ಕುಟುಂಬದವರೊಡನೆ ಸೇರಿ ನೇಜಿನೆಡುವುದನ್ನು ಶಾಲಾ ಮಕ್ಕಳು ಕಲಿತರು. ಅಪರಾಹ್ನದ ಬಳಿಕ ಮೂಡಂಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಲಸಿನ ಸೊಳೆ ಉಪ್ಪಿನಲ್ಲಿ ಹಾಕುವ ಕಾರ್ಯದಲ್ಲೂ ಮಕ್ಕಳು ಉತ್ಸಾಹದಲ್ಲಿ ತೊಡಗಿಸಿಕೊಂಡಿದ್ದು, ಸುಮಾರು 23 ಹಲಸಿನ ಕಾಯಿ ಬಿಡಿಸಿ ಉಪ್ಪಿನಲ್ಲಿ ಹಾಕಿ ಇಡಲಾಯಿತು. ಶಾಲಾಮುಖ್ಯಶಿಕ್ಷಕ ಅರವಿಂದ ಕುಡ್ಲಅವರ ವಿಶೇಷ ಮುತುವರ್ಜಿಯಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಸಹಶಿಕ್ಷಕರು, ಮಕ್ಕಳ ಪೋಷಕರು ಸಹಕಾರ ನೀಡಿದರು.