ಮಂಗಳೂರು: ಯೆಯ್ಯಾಡಿಯ ಮೈಂಡ್ ಸ್ಪೇಸ್ ಕಟ್ಟಡದಲ್ಲಿ ಚೇರ್ ಸ್ಟುಡಿಯೋ 2ನೇ ಮಳಿಗೆ ಗುರುವಾರ ಶುಭಾರಂಭಗೊಂಡಿತು.
ರಾಮಕೃಷ್ಣ ಮಠದ ಅಧ್ಯ‘ಕ್ಷ ಸ್ವಾಮಿ ಜಿತಕಾಮಾನಂದ ಜೀ ಅವರು ಮಳಿಗೆಯನ್ನು ಉದ್ಘಾಟಿಸಿ, ಇಂದು ದೇಶಕ್ಕೆ ಅಗತ್ಯವಿರುವುದು ಉದ್ಯೋಗಾಕಾಂಕ್ಷಿ ಯುವ ಸಮುದಾಯಕ್ಕಿಂತ ಉದ್ಯೋಗ ಸೃಷ್ಟಿಸುವ ಸಾಮರ್ಥ್ಯವಿರುವ ಯುವಕರು. ಚೇರ್ ಸ್ಟುಡಿಯೋ ಮೂಲಕ ರಾಮಕೃಷ್ಣ ಆಶ್ರಮದಲ್ಲಿ ಶಿಕ್ಷಣ ಪಡೆದ ಹುಡುಗ ರಾಘವೇಂದ್ರ ನೆಲ್ಲಿಕಟ್ಟೆ ತಮ್ಮ ಸಾಧನೆಯ ಮೂಲಕ ಯುವಕರಿಗೆ ಮಾರ್ಗದರ್ಶಕರಾಗಿದ್ದಾರೆ ಎಂದರು.
ಎ.ಜೆ. ಸಮೂಹ ಸಂಸ್ಥೆಗಳ ಅಧಕ್ಷ ಡಾ. ಎ.ಜೆ. ಶೆಟ್ಟಿ ಅವರು, ಕಳೆದ ಏಳು ವರ್ಷಗಳಿಂದ ಚೇರ್ ಸ್ಟುಡಿಯೋ ನಗರದಲ್ಲಿ ತನ್ನದೇ ಆದ ಹೆಸರು ಪಡೆದಿದ್ದು, ಗುಣಮಟ್ಟದ ಫರ್ನೀಚರ್ಗಳನ್ನು ಸೂಕ್ತ ಬೆಲೆಗೆ ಮಾರಾಟ ಮಾಡುವುದರ ಜತೆಗೆ ಉತ್ತಮ ಸರ್ವಿಸ್ ನೀಡುವುದು ಸಂಸ್ಥೆಯ ವಿಶೇಷತೆಯಾಗಿದೆ. ಬೆಳೆಯುತ್ತಿರುವ ಮಂಗಳೂರು ನಗರಕ್ಕೆ ಇಂತಹ ಮಳಿಗೆಗಳ ಅಗತ್ಯವಿದೆ ಎಂದರು.
ಮುಕುಂದ್ ಎಂಜಿಎಂ ರಿಯಾಲ್ಟಿ ಪಾಲುದಾರ ಗುರುದತ್ ಶೆಣೈ ಅವರು ಮಾತನಾಡಿ, ನಗರಲ್ಲಿ ಸುಮಾರು ೨೫ರಷ್ಟು ಐಟಿ ಸಂಸ್ಥೆಗಳು ಶೀಘ್ರದಲ್ಲಿ ಕಚೇರಿ ತೆರೆಯಲಿದ್ದು, ಇಂತಹ ಕಂಪನಿಗಳಿಗೆ ಅಗತ್ಯವಾಗಿ ಬೇಕಾಗಿರುವ ವಸ್ತುವೆಂದರೆ ಅದು ಚೇರ್. ಆದ್ದರಿಂದ ಚೇರ್ಗಳಿಗೆ ಬೇಡಿಕೆ ಎಂದಿಗೂ ಇರುತ್ತದೆ ಎಂದರು. ಚೇರ್ ಸ್ಟುಡಿಯೋ ಒಳಾಂಗಣ ವಿನ್ಯಾಸ ಮಾಡಿದ ಆರ್ಕಿಟೆಕ್ಟ್ ಚೇತನ್ ಕಾಮತ್ ಮತ್ತು ಸಂಸ್ಥೆಯ ಮ್ಯಾನೇಜರ್ ಗುಣಕರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಎಸ್ಡಿಎಂ ಸಂಸ್ಥೆಗಳ ಸಂಚಾಲಕಿ ಶ್ರುತಾ ಜಿತೇಶ್, ಕುಬೇರ ಕನ್ಸ್ ಸ್ಟ್ರಕ್ಷನ್ ಸಂಸ್ಥೆಯ ಮಾಲಕ ಪ್ರಭಾಕರ ಯೆಯ್ಯಾಡಿ ಉಪಸ್ಥಿತರಿದ್ದರು. ಚೇರ್ ಸ್ಟುಡಿಯೋ ಮಾಲಕ ರಾಘವೇಂದ್ರ ನೆಲ್ಲಿಕಟ್ಟೆ ಸ್ವಾಗತಿಸಿ, ಆಫೀಸ್ ಫರ್ನೀಚರ್ಗಳಿಗೆ ಸಂಬಂಧಿಸಿದಂತೆ ಚೇರ್ ಸ್ಟುಡಿಯೋ ದ.ಕ, ಉಡುಪಿ ಜಿಲ್ಲೆಗಳ ಜತೆ ಬೆಂಗಳೂರಿನಲ್ಲೂ ಸೇವೆ ನೀಡುತ್ತಿದೆ. ಸೇಲ್ಸ್ ಜತೆಗೆ ಸರ್ವಿಸ್ಗೆ ಹೆಚ್ಚು ಮಹತ್ವ ಕೊಟ್ಟ ಕಾರಣ ಇತರ ಸಂಸ್ಥೆಗಳಿಂದ ಮುಂಚೂಣಿಯಲ್ಲಿದ್ದೇವೆ. ಕಚೇರಿ ಮತ್ತು ಕಮರ್ಷಿಯಲ್ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದು, ಗುಣಮಟ್ಟದ ಫರ್ನೀಚರ್ಗಳಿಂದಾಗಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ಅರೆಹೊಳೆ ಸದಾಶಿವ ರಾವ್ ಮತ್ತು ಶ್ವೇತಾ ಅರೆಹೊಳೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.