News Karnataka Kannada
Wednesday, May 08 2024
ಮಂಗಳೂರು

ಬೆಳ್ತಂಗಡಿ: ಭಾರತೀಯ ಮಜ್ದೂರ್ ಸಂಘದ ತಾಲೂಕು ಸಮಿತಿ ಕಚೇರಿಯಲ್ಲಿ ಬಿಎಂಎಸ್ ಅಭಿಯಾನ

Blt
Photo Credit : By Author

ಬೆಳ್ತಂಗಡಿ: ತಾಲೂಕಿನ ವಸತಿ ಯೋಜನೆಯ ಫಲಾನುಭವಿಗಳ ಆಧಾರ್- ಬ್ಯಾಂಕ್ ಖಾತೆಗೆ ಲಿಂಕ್ ನ ಸಮಸ್ಯೆಯ ಕುರಿತು ಪರಿಹಾರ ನೀಡುವ ನಿಟ್ಟಿನಲ್ಲಿ ಅಭಿಯಾನವನ್ನು ಭಾರತೀಯ ಮಜ್ದೂರ್ ಸಂಘದ ತಾಲೂಕು ಸಮಿತಿ ಕಚೇರಿಯಲ್ಲಿ ನಡೆಸಲಾಯಿತು.

ಈ ಸಂದರ್ಭದಲ್ಲಿ ವಸತಿ ಯೋಜನೆ ಫಲಾನುಭವಿಗಳು ಮನೆಗಾಗಿ ಅರ್ಜಿ ಸಲ್ಲಿಸಿ, ಆಧಾರ್ ಕಾರ್ಡ್- ಬ್ಯಾಂಕ್ ಲಿಂಕ್ ಸಮಸ್ಯೆಯಿಂದ ವಸತಿ ನಿಗಮದಿಂದ ಫಲಾನುಭವಿಗಳ ಖಾತೆಗೆ ಹಣ ಹಾಕಿದರೂ ಪಲಾನುಭವಿಗಳ ಖಾತೆಗೆ ಜಮಾ ಆಗದೆ ತಿರಸ್ಕೃತ ವಾಗುತ್ತಿದ್ದು ಈ ಕುರಿತು ಸಮಸ್ಯೆಯನ್ನು ಬಳಲುತ್ತಿದ್ದ ಫಲಾನುಭವಿಗಳಿಗೆ ಭಾರತೀಯ ಮಜ್ದೂರ್ ಸಂಘದ ತಾಲೂಕು ಸಮಿತಿ ಬೆಳ್ತಂಗಡಿ ಇದರ ವತಿಯಿಂದ ಇಂದು ಅಭಿಯಾನ ಕೈಗೊಂಡು ಡಿ. ಬಿ. ಟಿ. ಅ್ಯಪ್ ನ ಮುಖಾಂತರ ಬ್ಯಾಂಕ್ ಖಾತೆಯಲ್ಲಿ ಚೆಕ್ ಮಾಡಿಸಿ ಲಿಂಕ್ ಇಲ್ಲದ ಫಲಾನುಭವಿಗಳ ಬ್ಯಾಂಕ್ ಖಾತೆಯನ್ನು ಆಧಾರ್ ಗೆ ಲಿಂಕ್ ಮಾಡುವ ದೃಷ್ಟಿಯಲ್ಲಿ ಲೀಡ್ ಬ್ಯಾಂಕ್ ಅನ್ನು ಹಿರಿಯ ಅಧಿಕಾರಿಗಳ ಸಹಾಯ ತೆಗೆದುಕೊಂಡು ಆಯಾಯ ಬ್ಯಾಂಕ್ ಅಧಿಕಾರಿಗಳಿಗೆ ಈ ಖಾತಾದಾರರನ್ನು ಲಿಂಕ್ ಮಾಡುವ ಕುರಿತು ನಿರ್ದೇಶಿಸಲಾಯಿತು ಈ ಸಂದರ್ಭ ಭಾರತೀಯ ಮಜ್ದೂರ್ ಸಂಘದ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ಬಿಎಂಎಸ್ ನ ತಾಲೂಕು ಸಂಯೋಜಕ ಸಾಂತಪ್ಪ ಕಲ್ಮಂಜ ಕಚೇರಿ ವ್ಯವಸ್ಥಾಪಕರಾದ ರೂಪಲತಾ ಶುಭ, ಅಶ್ವಿನಿ, ರಮ್ಯಾ ಸಹಕರಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು