News Karnataka Kannada
Sunday, April 28 2024
ಮಂಗಳೂರು

ಉಳ್ಳಾಲ: ಮಂಗಳೂರು ಕ್ಷೇತ್ರದಲ್ಲಿ ಬಿಜೆಪಿ ಅರಳಲಿದೆ – ಸತೀಶ್ ಕುಂಪಲ

Bjp will blossom in Mangaluru: Satish Kumpala
Photo Credit : News Kannada

ಉಳ್ಳಾಲ: ಕಾರ್ಯಕರ್ತರ ಉತ್ಸಾಹ , ಶ್ರಮಕ್ಕೆ ತಕ್ಕದಾಗಿ ಈ ಬಾರಿ ಮತದಾರರು ಉತ್ಸಾಹದಿಂದ ಮತ ಚಲಾಯಿಸುತ್ತಿದ್ದಾರೆ. ಪ್ರಜಾಪ್ರಭುತ್ವದ ಉತ್ಸವದಲ್ಲಿ ಮತದಾರರ ಪಾಲ್ಗೊಳ್ಳುವಿಕೆ ಹಾಗೂ ಜವಾಬ್ದಾರಿ ಪ್ರಮುಖವಾದದ್ದು, ಕಾರ್ಯಕರ್ತರ ಪರಿಶ್ರಮಕ್ಕೆ ಮಂಗಳೂರು ಕ್ಷೇತ್ರದಲ್ಲಿ ಬಿಜೆಪಿ ಬಹುಮತದಿಂದ ಆಯ್ಕೆಯಾಗುವ ಭರವಸೆಯಿದೆ ಎಂದು ಮಂಗಳೂರು (ಉಳ್ಳಾಲ) ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸತೀಶ್ ಕುಂಪಲ ಹೇಳಿದ್ದಾರೆ.

ಕುಂಪಲ ಸರಕಾರಿ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ ೧೨೭ ರಲ್ಲಿ ಪತ್ನಿ ಮತ್ತು ಮಗಳ ಜತೆಗೆ ಆಗಮಿಸಿ ಮತಚಲಾವಣೆ ನಡೆಸಿದ ಬಳಿಕ ಮಾತನಾಡಿದರು.

ಪಕ್ಷಕ್ಕಾಗಿ ಹಲವು ವರ್ಷಗಳಿಂದ ದುಡಿದು ಪಂಚಾಯಿತಿ ಸದಸ್ಯನಾಗಿ, ಜಿ.ಪಂ ಉಪಾಧ್ಯಕ್ಷನಾಗಿ ಕ್ಷೇತ್ರದುದ್ದಕ್ಕೂ ಸಂಘಟನಾತ್ಮಕವಾಗಿ ದುಡಿದ ಅನುಭವವಿದೆ. ಎಲ್ಲರ ಆಶೀರ್ವಾದ ಹಾಗೂ ಕಾರ‍್ಯಕರ್ತರ ಬೆಂಬಲದ ಪರವಾಗಿ ಈ ಬಾರಿ ಮಂಗಳೂರು ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆಯಾಗಿರುವೆ. ಸಾಮಾನ್ಯ ಕರ‍್ಯಕರ್ತನಿಗಾಗಿ ಕಾರ‍್ಯಕರ್ತರ ದುಡಿದ ಶ್ರಮಕ್ಕೆ ಎಂದಿಗೂ ಚಿರಋಣಿ. ಇಂದು ಮತದಾರರ ಮನವೊಲಿಸುವತ್ತ ಕಾರ‍್ಯಕರ್ತರು ಶ್ರಮಪಡುತ್ತಿರುವ ಕಾರ್ಯಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು.

ಕ್ಷೇತ್ರ ಚುನಾವಣಾ ಉಸ್ತುವಾರಿ ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡಿ, ಈ ಬಾರಿಯ ವಿಜಯೋತ್ಸವ ಬಿಜೆಪಿಯ ಪಾಲಿಗೆ ದೊರೆಯಬೇಕಿದೆ. ಸರಳ ಸಜ್ಜನಿಕೆಯ ಸತೀಶ್ ಕುಂಪಲ ಅವರನ್ನು ಹೈಕಮಾಂಡ್ ಆಯ್ಕೆಗೊಳಿಸಿದಂತೆ ಕ್ಷೇತ್ರ ಜನರೂ ಅವರ ಕೈಹಿಡಿಯಲಿದ್ದಾರೆ. ಕ್ಷೇತ್ರದುದ್ದಕ್ಕೂ ಸಂಚರಿಸಿ ಕಾರ‍್ಯಕರ್ತರ ಪ್ರೀತಿಗೆ ಪಾತ್ರರಾದ ಸತೀಶಣ್ಣ, ವಿಧಾನಸಭೆಗೆ ಪ್ರವೇಶಿಸುವಂತೆ ಆಯ್ಕೆಯಾಗಿ ಬರಲಿ ಎಂದು ಹಾರೈಸಿದರು.
ಮತದಾನ ನಡೆಸುವ ಮುನ್ನ ಸೋಮೇಶ್ವರದ ಸೋಮನಾಥೇಶ್ವರ ದೇವಸ್ಥಾನ ಮತ್ತು ಕುಂಪಲದ ಶ್ರೀ ಬಾಲಕೃಷ್ಣ ಮಂದಿರದಲ್ಲಿ ವಿಶೇಷ ಪೂಜೆಯಲ್ಲಿ ಭಾಗಿಯಾಗಿ ಬಳಿಕ ಮತಚಲಾಯಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು