ಬೆಳ್ತಂಗಡಿ: 18 ಕರ್ನಾಟಕ ಬೆಟಾಲಿಯನ್ ಎನ್ ಸಿ ಸಿ ಆರ್ಮಿ ವತಿಯಿಂದ 2022-23ರ ಮೊದಲನೇಯ ಎ ಟಿ ಸಿ ಶಿಬಿರವು ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರಿನಲ್ಲಿ ನಡೆಯಿತು.
“ಸೇನೆಯ ನಿಸ್ವಾರ್ಥ ಸೇವಾಭಾವ ತುಂಬಾ ಅಮೂಲ್ಯವಾದದ್ದು ಅದರಂತೆ ಎನ್ ಸಿ ಸಿ ಕೆಡೆಟ್ಸ್ ಗಳು ಕೂಡ ಆ ಗುಣಗಳನ್ನು ಜೀವನದಲ್ಲಿ ಅನುಸರಿಸಬೇಕು” ಎಂದು ಕಮಾಂಡಿಂಗ್ ಆಫಿಸರ್ ಕರ್ನಲ್ ನಿತಿನ್ ಭಿಡೆ ಉದ್ಘಾಟಿಸಿ ಮಾತನಾಡಿದರು.
ಸಭೆಯ ಅಧ್ಯಕ್ಷ ಸ್ಥಾನದಿಂದ ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಗಳ ಸಂಚಾಲಕರಾದ ವಂದನಿಯ ಬಝಿಲ್ ವಾಸ್ ಮಾತನಾಡಿ, ತಮ್ಮ ಕಾಲೇಜಿನಲ್ಲಿ ಶಿಬಿರವನ್ನು ನಡೆಸುತ್ತಿರುವದಕ್ಕೆ ಸಂತಸ ವ್ಯಕ್ತಪಡಿಸಿ ಕೆಡೆಟ್ಸ್ ಗಳಿಗೆ ಶುಭಕೋರಿದರು.
10 ದಿನದ ಶಿಬಿರದಲ್ಲಿ ಲೆಫ್ಟಿನೆಂಟ್.ಕರ್ನಲ್ ಅಮಿತಾಭ ಸಿಂಗ್,ಅಡ್ಮಿನಿಸ್ಟ್ರೇಟೆಟಿವ್ ಆಫಿಸರ್ 18 ಕನಾ೯ಟಕ ಬೆಟಾಲಿಯನ್ ಎನ್ ಸಿ ಸಿ, ರಾಜು ಗುರುಂಗ ಎಸ್ ಎಮ್, ಡಾ ಜೋಸೆಫ್ ಎನ್ ಎಂ, ಕಾಲೆಜು ಪ್ರಾಂಶುಪಾಲರು, ಒಟ್ಟು 550 ಕೆಡೆಟ್ಸ್ ಗಳು ಮತ್ತು 5 ಎನ್ ಸಿ ಸಿ ಅಧಿಕಾರಗಳು ಉಪಸ್ಥಿತರಿದ್ದರು.