News Karnataka Kannada
Friday, May 17 2024
ಮಂಗಳೂರು

ಬೆಳ್ತಂಗಡಿ ತಾಲೂಕು ಪತ್ರಕರ್ತ ಸಂಘದ ವಾರ್ಷಿಕ ಮಹಾಸಭೆ

Belthangady Taluk Journalists Association Annual General Meeting
Photo Credit : By Author

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಪತ್ರಕರ್ತ ಸಂಘದ ವಾರ್ಷಿಕ ಮಹಾಸಭೆ ಶನಿವಾರ ಇಲ್ಲಿನ ವಾರ್ತಾಭವನದಲ್ಲಿ ನಡೆಯಿತು.

ಸಭೆಯಲ್ಲಿ ೨೦೨೩ ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದು ಅಧ್ಯಕ್ಷರಾಗಿ ಜೈ ಕನ್ನಡಮ್ಮ ವಾರಪತ್ರಿಕೆಯ ವರದಿಗಾರ ಹೃಷಿಕೇಶ್‌ ಧರ್ಮಸ್ಥಳ, ಉಪಾಧ್ಯಕ್ಷರಾಗಿ ವಿಜಯಕರ್ನಾಟಕ ವರದಿಗಾರ ಅರವಿಂದ ಹೆಬ್ಬಾರ್‌ ಮುಂಡಾಜೆ, ಪ್ರಧಾನ ಕಾರ್ಯದರ್ಶಿಯಾಗಿ ಈ ಸಂಜೆ ವರದಿಗಾರ ಪ್ರಸಾದ್‌ ಶೆಟ್ಟಿ ಏಣಿಂಜೆ, ಜತೆ ಕಾರ್ಯದರ್ಶಿಯಾಗಿ ಉದಯವಾಣಿ ವರದಿಗಾರ ಪದ್ಮನಾಭ ಕುಲಾಲ್‌ ವೇಣೂರು ಹಾಗೂ ಕೋಶಾಧಿಕಾರಿಯಾಗಿ ಸುದ್ದಿ ಬಿಡುಗಡೆ ವರದಿಗಾರ ತುಕಾರಾಮ ಅವಿರೋಧವಾಗಿ ಆಯ್ಕೆಯಾದರು.

ಸದಸ್ಯರಾಗಿ ಆರ್.ಎನ್.ಪೂವಣಿ, ಶ್ರೀನಿವಾಸ ತಂತ್ರಿ, ದೇವಿಪ್ರಸಾದ್‌, ಬಿ.ಎಸ್.ಕುಲಾಲ್‌,ಮಂಜುನಾಥ ರೈ, ಜಾರಪ್ಪ ಪೂಜಾರಿ, ಅಚುಶ್ರೀ ಬಾಂಗೇರು, ಭುವನೇಶ್‌ ಗೇರುಕಟ್ಟೆ, ಚೈತ್ರೇಶ್‌ ಇಳಂತಿಲ, ಮನೋಹರ ಬಳಂಜ, ಗಣೇಶ್‌ ಶಿರ್ಲಾಲು, ಪುಷ್ಪರಾಜ ಶೆಟ್ಟಿ, ಅಶ್ರಫ್‌ ಆಲಿ ಕುಂಞ, ಧನಕೀರ್ತಿ ಆರಿಗ, ಶಿಬಿ ಧರ್ಮಸ್ಥಳ, ದೀಪಕ ಆಠವಳೆ ಮುಂದುವರಿಯಲಿದ್ದಾರೆ. ಹಿರಿಯ ಪತ್ರಕರ್ತ ಆರ್.ಎನ್‌.ಪೂವಣಿ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.

ಇದಕ್ಕೂ ಮೊದಲು ಗಣೇಶ್‌ ಶಿರ್ಲಾಲು ಅವರ ಅಧ್ಯಕ್ಷತೆಯಲ್ಲಿ ವಾರ್ಷಿಕ ಸಭೆ ನಡೆದು ವಾರ್ಷಿಕ ವರದಿ, ಲೆಕ್ಕಪತ್ರ ಮಂಡಿಸಿ ಅನುಮೋದನೆ ಪಡೆಯಲಾಯಿತು. ಬಳಿಕ ಅಧಿಕಾರ ಹಸ್ತಾಂತರ ನಡೆಯಿತು. ಮುಂದಿನ ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚಿಸಿ ಸಂಘಕ್ಕೆ ನಿವೇಶನ ಖರೀದಿ ಹಾಗೂ ಕಟ್ಟಡ ರಚನೆಯ ಸಂಕಲ್ಪವನ್ನು ಕೈಗೊಳ್ಳಲಾಯಿತು. ನೂತನ ಅಧ್ಯಕ್ಷ ಕಾರ್ಯದರ್ಶಿಯವರು ಎಲ್ಲರ ಸಹಕಾರ ಕೋರಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು