ಬೆಳ್ತಂಗಡಿ: ವೇಣೂರು ಸನಿಹದ ಕರಿಮಣೇಲು ಶ್ರೀಕ್ಷೇತ್ರ ದೇಲಂಪುರಿ ಶ್ರೀ ಮಹಾದೇವ ಮಹಾಗಣಪತಿಯ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಡಿ.24 ರಿಂದ 30 ರವರೆಗೆ ನೆರವೇರಲಿದೆ. ಅದರ ಕರೆಯೋಲೆಯನ್ನು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಗೌರವ ಮಾರ್ಗದರ್ಶಕ, ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಲೋಕಾರ್ಪಣೆಗೊಳಿಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಶಾಸಕ ಹರೀಶ್ ಪೂಂಜ, ಕಾರ್ಯಾಧ್ಯಕ್ಷ ಬಾಲಕೃಷ್ಣ ಭಟ್ ದಡ್ಡು, ಪ್ರಧಾನ ಕಾರ್ಯದರ್ಶಿಗಳಾದ ಜಗದೀಶ ನಾಯಕ್ ಮೂಂಕಾಡಿ, ಸುಧೀರ ಭಂಡಾರಿ, ಖಜಾಂಚಿ ಶ್ರೀಕೃಷ್ಣ ಕೆ., ಸ್ವಾಗತ ಸಮಿತಿ ಸಹ ಸಂಚಾಲಕ ದೇಜಪ್ಪ ಶೆಟ್ಟಿ, ಸದಸ್ಯ ದಯಾನಂದ ಭಂಡಾರಿ, ಕಚೇರಿ ಸಂಚಾಲಕ ಸುರೇಶ್ , ವೈದಿಕ ಸಮಿತಿ ಸಂಚಾಲಕ ಮಹೇಶ್ ಭಟ್, ಹೊರೆಕಾಣಿಕೆ ಸಹಸಂಚಾಲಕ ಹರೀಶ್ ಪಿ.ಎಸ್., ಆಹಾರ ಸಮಿತಿ ಸಹ ಸಂಚಾಲಕ ರತ್ನಾಕರ ಹೆಗ್ಡೆ, ನೀರು- ವಿದ್ಯುತ್ ಸರಬರಾಜು ಸಮಿತಿ ಸಂಚಾಲಕ ಜಿನ್ನು ಮತ್ತಿತರರು ಉಪಸ್ಥಿತರಿದ್ದರು.