ಬೆಳ್ತಂಗಡಿ: ಬೆಳ್ತಂಗಡಿಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಹೋಗಿದ್ದ ವ್ಯಕ್ತಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ದೂರು ದಾಖಲಾಗಿದೆ.
ಓಡಿಲ್ನಾಳ ಗ್ರಾಮದ ಸಂಬೋಳ್ಯ ಮನೆ ನಿವಾಸಿ ಚಿನ್ನಯ್ಯ ಶೆಟ್ಟಿಗಾರ್ ಅವರ ಪುತ್ರ ಶೇಖರ ಶೆಟ್ಟಿಗಾರ (53) ಎಂಬವರೇ ನಾಪತ್ತೆಯಾದವರು.
ಸೆ. 21 ರಂದು ಬೆಳಿಗ್ಗೆ 9 ಗಂಟೆಗೆ ಗಂಟೆಗೆ ಅವರು ಮನೆಯಿಂದ ಹೋರಹೋಗಿದ್ದಾರೆ. ಈ ಮೊದಲು ಕೂಡಾ ಅವರು ಇದೇ ರೀತಿ ಮನೆಯಿಂದ ಹೋದವರು 2-3 ದಿನಗಳ ನಂತರ ಮನೆಗೆ ಬರುತ್ತಿದ್ದರು. ಅದೇ ರೀತಿಯಾಗಿ ಮನೆಗೆ ಬರಬಹುದೆಂಬ ನಿರೀಕ್ಷೆಯಿಂದ ಕಾಯಲಾಗಿದ್ದು, ಆದರೂ ಮನೆಗೆ ಬಾರದೇ ಇರುವುದರಿಂದ ತಡವಾಗಿ ದೂರು ನೀಡಿದ್ದಾಗಿದೆ ಎಂದು ಅವರ ಪುತ್ರ, ದೂರು ದಾರ ಮೋಹನ ಶೆಟ್ಟಿಗಾರ ಉಲ್ಲೇಖಿಸಿದ್ದಾರೆ.