News Karnataka Kannada
Friday, May 17 2024
ಮಂಗಳೂರು

ಬೆಳ್ತಂಗಡಿ: ಸಮುದಾಯಭವನ ಉದ್ಘಾಟನೆಯ ಆಮಂತ್ರಣ ಪತ್ರಿಕೆ ಬಿಡುಗಡೆ

Belthangady: Invitation card released for inauguration of Community Hall
Photo Credit : By Author

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಕನ್ಯಾಡಿಯಲ್ಲಿ ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾ (ರಿ) ವತಿಯಿಂದ ಸುಮಾರು ರೂ 1.60 ಕೋಟಿ ವೆಚ್ಚದಿಂದ ನಿರ್ಮಾಣಗೊಂಡ ತುಳು ಶಿವಳ್ಳಿ ಬ್ರಾಹ್ಮಣ ಸಮುದಾಯ ಭವನ “ಹರಿಹರಾನುಗ್ರಹ “ದ ಉದ್ಘಾಟನಾ ಕಾರ್ಯಕ್ರಮವು ಅ. 27ಮತ್ತು 28 ರಂದು ನಡೆಯಲಿದ್ದು ಅದರ ಆಮಂತ್ರಣ ಪತ್ರಿಕೆಯನ್ನು ಸೆ. 11 ರಂದು ಉಜಿರೆ ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಲ್ಲಿ ಪ್ರಾರ್ಥಿಸಿ , ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ ರ ಅಧ್ಯಕ್ಷತೆಯಲ್ಲಿ ಬಿಡುಗಡೆಗೊಳಿಸಲಾಯಿತು.

ಗೌರವಾಧ್ಯಕ್ಷ ವಿಜಯರಾಘವ ಪಡುವೆಟ್ನಾಯರಿಗೆ ಆಮಂತ್ರಣ ಪತ್ರ ನೀಡಿ ಚಾಲನೆ ನೀಡಲಾಯಿತು. ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ಸ್ವಾಗತಿಸಿ,,ಪ್ರಸ್ತಾವಿಸಿದರು. ಕಟ್ಟಡ ನಿರ್ಮಾಣ ಸಮಿತಿಯ ಜತೆಕಾರ್ಯದರ್ಶಿ ಮುರಳಿ ಕೃಷ್ಣ ಆಚಾರ್ ನಿರೂಪಿಸಿ,ವಂದಿಸಿದ ಕಾರ್ಯಕ್ರಮದಲ್ಲಿ ತಾಲೂಕು ಘಟಕಾಧ್ಯಕ್ಷೆ ಸ್ವರ್ಣ ಶ್ರೀರಂಗ ನೂರಿತ್ತಾಯ,ಕಾರ್ಯದರ್ಶಿ ಗಾಯತ್ರಿ ಶ್ರೀಧರ್,ಸಂಚಾಲಕಿ ಶೋಭಾ ಸುರೇಶ ಕುದ್ರೆನ್ತಯ,ಉಜಿರೆ ವಲಯ ಮಹಿಳಾ ಘ ಟಕಾಧ್ಯಕ್ಷೆ ಸರೋಜಾ ಕೆದಿಲಾಯ,ಕಾರ್ಯದರ್ಶಿ ವಾಣಿ ಸಂಪಿಗೆತ್ತಾಯ, ಕುವೆಟ್ಟು ವಲಯಾಧ್ಯಕ್ಷ ಪ್ರೊ!ಮಧೂರು ಮೋಹನ ಕಲ್ಲೂರಾಯ,ಮತ್ತು ಕಟ್ಟಡ ನಿರ್ಮಾಣ ಸಮಿತಿ ಕಾರ್ಯಾಧ್ಯಕ್ಷ ಗೋಪಾಲ ಭಟ್ ಕೆ ಉಪಸ್ಥಿತರಿದ್ದರು.

“ಹರಿಹರಾನುಗ್ರಹ “ಸಮುದಾಯಭವನ ಉದ್ಘಾಟನೆ : ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳವರು ಅ 28 ರಂದು “ಹರಿಹರಾನುಗ್ರಹ “ಸಮುದಾಯಭವನವನ್ನು ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ. ಕಟೀಲು ಕ್ಷೇತ್ರದ ಅರ್ಚಕ ಹರಿನಾರಾಯಣದಾಸ ಅಸ್ರಣ್ಣರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೂಡಬಿದ್ರಿಯ ಉದ್ಯಮಿ ಶ್ರೀಪತಿ ಭಟ್,ತುಳು ಶಿವಳ್ಳಿ ಬ್ರಾಹ್ಮಣ ಸಭಾದ ದ ಕ. ಜಿಲ್ಲಾಧ್ಯಕ್ಷ ಡಾ!ಎಂ.ಎಂ ದಯಾಕರ್ ಭಾಗವಹಿಸಲಿದ್ದಾರೆ. ಅ. 26 ರಂದು ಅಪರಾಹ್ನ ವಿವಿಧ ವಲಯಗಳಿಂದ ಹೊರೆ ಕಾಣಿಕೆ ಸ್ವೀಕರಿಸಲಾಗುವುದು. ಅ.27 ರಂದು ಸಂಜೆ ಹಾಗು 28 ರಂದು ಪೂರ್ವಾಹ್ನ ವೇದಮೂರ್ತಿ ರಾಮಕೃಷ್ಣ ಕಲ್ಲೂರಾಯ ರ ನೇತೃತ್ವದಲ್ಲಿ ವೈದಿಕ ವಿಧಿ ವಿಧಾನಗಳು,ಚಂಡಿಕಾ ಹವನ ಇತ್ಯಾದಿ ನಡೆಯಲಿದೆ. ಅಪರಾಹ್ನ ತುಳು ಶಿವಳ್ಳಿ ಭಾಷೆಯಲ್ಲಿ ಯಕ್ಷಗಾನ ತಾಳಮದ್ದಳೆ ಕೂಟ ಏರ್ಪಡಿಸಲಾಗಿದೆ ಎಂದು ತಾಲೂಕು ತುಳು ಶಿವಳ್ಳಿ ಸಭಾಧ್ಯಕ್ಷ ರಾಘವೆಂದ್ರ ಬೈಪಾಡಿತ್ತಾಯ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು