ಬೆಳ್ತಂಗಡಿ: ಬೆಳ್ತಂಗಡಿ ನಗರ ಗುರುವಾಯನಕೆರೆ ಸುತ್ತಮುತ್ತ ಗುರುವಾರ ಗುಡುಗು ಸಹಿತ ಭಾರಿ ಮಳೆಯಾಗಿದ್ದು ಮರಗಳು ರಸ್ತೆಗೆ ವಿದ್ಯುತ್ ಕಂಬ ಬಿದ್ದು ವಿದ್ಯುತ್ ಕಂಬ ಹಾನಿಯಾಗಿದ್ದು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ.
ಗುರುವಾಯನಕೆರೆ ಪಿಲಿಚಾಮುಂಡಿ ಕಲ್ಲು ಬಳಿ ರಾಷ್ಟ್ರೀಯ ಹೆದ್ದಾರಿಗೆ ಬೃಹತ್ ಮರವೊಂದು ಅಡ್ಡ ಬಿದ್ದಿದ್ದು ಕೆಲವು ತಾಸು ರಾಷ್ಟ್ರೀಯ ಹೆದ್ದಾರಿ ಪ್ರಯಾಣ ಸಂಚಾರಕ್ಕೆ ಅಡೆತಡೆಯುಂಟಾಯಿತು. ಸ್ಥಳದಲ್ಲಿದ್ದ ಬೆಳ್ತಂಗಡಿ ನಗರ ಪಂಚಾಯತ್ ಉಪಾಧ್ಯಕ್ಷ ಜಯಾನಂದ ಗೌಡ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿ ಸ್ಥಳಿಯರೊಂದಿಗೆ ಮರ ತೆರವುಗೊಳಿಸಲು ಸಹಕರಿಸಿದರು.
ಬೆಳ್ತಂಗಡಿ ಕೋರ್ಟ್ ರೋಡ್ ತಾಲೂಕು ಪಂಚಾಯತ್ ಮತ್ತು ಪಿಡಡಬ್ಲ್ಯೂಡಿ ವಸತಿ ಗೃಹದ ಬಳಿ ಬೃಹತ್ ಮರವೊಂದು ವಿದ್ಯುತ್ ಕಂಬದ ಮೇಲೆ ಬಿದ್ದಿದ್ದು ರಸ್ತೆಗೆ ಅಡ್ಡವಾಗಿ ಬಿದ್ದು ಕೆಲವು ಹೊತ್ತು ಸಂಚಾರ ಅಸ್ತವ್ಯಸ್ತಗೊಂಡಿತು. ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು, ಅರಣ್ಯ ಇಲಾಖೆ, ನಗರ ಪಂಚಾಯತ್ ಸಿಬಂದಿಗಳು ಬೇಟಿ ನೀಡಿ ವಿದ್ಯುತ್ ಕಂಬ ಮತ್ತು ಮರ ತೆರವಿಗೆ ಸಹಕರಿಸಿದರು.
ಕುವೆಟ್ಟು ಪಂ.ವ್ಯಾಪ್ತಿಯ ಕವಿತ ಅವರ ವಾಸದ ಮನೆ ಬಾಗಶ; ಹಾನಿಯಾಗಿದ್ದು ಪ್ರಾಣಹಾನಿ ಆಗಿರುವುದಿಲ್ಲ ಕುವೆಟ್ಟು ಗ್ರಾಮದ ಬಿಪಾತಿಮ್ಮ ವಾಸದ ಮನೆ ಭಾಗಶಃ ಹಾನಿಯಾಗಿದೆ.