News Karnataka Kannada
Monday, April 29 2024
ಮಂಗಳೂರು

ಬೆಳ್ತಂಗಡಿ: ಕಳೆಂಜ ನಂದಗೋಕುಲ ಗೋಶಾಲೆಯಲ್ಲಿ ದೀಪೋತ್ಸವ, ಸಾಮೂಹಿಕ ಗೋಪೂಜೆ

Deepotsavam, mass gopuja at Kalenja Nandagokula Goshala
Photo Credit : By Author

ಬೆಳ್ತಂಗಡಿ: ಹಿಂದು ಬಾಂಧವರಲ್ಲಿ ಗೋವಿಗೆ ಪವಿತ್ರ ಸ್ಥಾನಮಾನವಿದೆ. ಗೋವಿನ ಉಳಿವಿಗಾಗಿ ನಾವೆಲ್ಲ ಶ್ರಮಿಸಬೇಕಿದ್ದು ಹಿಂದು ಬಾಂಧವರು ತಮ್ಮ ಹುಟ್ಟುಹಬ್ಬ, ಗೃಹಪ್ರವೇಶದ ಸಹಿತ ಶುಭಕಾರ್ಯಕ್ರಮದಂದು ಗೋಶಾಲೆಗೆ ದಾನದ ರೂಪದಲ್ಲಿ ಸೇವೆ ನೀಡಬೇಕು ಎಂದು ಶಾಸಕ ಹರೀಶ್ ಪೂಂಜ ಕರೆ ನೀಡಿದರು.

ಸ್ವಾಮಿ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ಕಳೆಂಜ ಇದರ ಆಶ್ರಯದಲ್ಲಿ, ನಂದಗೋಕುಲ ದೀಪೋತ್ಸವ ಸಂಚಾಲನಾ ಸಮಿತಿ ವತಿಯಿಂದ ಕಳೆಂಜದ ನಂದಗೋಕುಲ ಗೋಶಾಲೆಯಲ್ಲಿ ಡಿ.25 ರಂದು ನಂದಗೋಕುಲ ದೀಪೋತ್ಸವ ಸಾಮೂಹಿಕ ಗೋಪೂಜೆ, ಗೋನಂದಾರತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗೋಶಾಲೆ, ಗೋವಿನ ಪರಿಸರದ ಸುವ್ಯವಸ್ಥೆಯಾಗಿಸುವಲ್ಲಿ ತಾಲೂಕಿ‌ನ 81 ಗ್ರಾಮದ ಮಂದಿ ನೆರವಾಗಬೇಕು. ನಂದಗೋಕುಲದಲ್ಲಿ ಟ್ರಸ್ಟ್ ನ ಇಚ್ಚೆಯಂತೆ ಗಾಯಗೊಂಡ ಹಾವುಗಳಿಗೆ ಚಿಕಿತ್ಸೆ ನೀಡಬೇಕೆಂಬ ಟ್ರಸ್ಟ್ ನ ಚಿಂತನೆಯಂತೆ ಉರಗ ಸಂಗ್ರಹಾಲಯ ನಿರ್ಮಿಸಲು ಚಿಂತಿಸಲಾಗುವುದು ಎಂದು ತಿಳಿಸಿದರು.

ಬರೋಡ ತುಳುಕೂಟ ಅಧ್ಯಕ್ಷ, ಉದ್ಯಮಿ ಶಶಿಧರ್ ಶೆಟ್ಟಿ ನವಶಕ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾವೆಲ್ಲರೂ ಹಿಂದುಗಳು, ಗೋರಕ್ಷಣೆ ನಮ್ಮ ಆದ್ಯ ಕರ್ತವ್ಯವಾಗಿದೆ. ಗೋಶಲಾಗೆ ತನ್ನ ಮುಂದಿನ 25 ವರ್ಷದ ಹುಟ್ಟುಹಬ್ಬದ ಪ್ರಯುಕ್ತ ತಲಾ 10 ಸಾವಿರ ರೂ. ನಂತೆ 2.50 ಲಕ್ಷ ರೂ. ನೀಡುವುದಾಗಿ ಘೋಷಿಸಿದರು.

ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವೇಂದ್ರ ಹೆಗ್ಡೆ ಶುಭಹಾರೈಸಿ, ದೇವರಿಗಿಂತ ಹೆಚ್ಚು ಗೋಮಾತೆಯನ್ನು ಪೂಜಿಸುವ ಧರ್ಮವಿದ್ದರೆ ಅದು ಹಿಂದೂ ಧರ್ಮ. ನಂದಗೋಕುಲ ಗೋಶಾಲೆ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.

ಆರ್.ಎಸ್.ಎಸ್. ಉಜಿರೆ ತಾಲೂಕು ಸಂಘಚಾಲಕ ವಿನಯಚಂದ್ರ ಉಜಿರೆ, ಅಮೇರಿಕ ವೆಂಚರ್‌ಸಾಫ್ಟ್ ಗ್ಲೋಬಲ್ ಸಂಸ್ಥೆಗಳ ಸಂಸ್ಥಾಪಕ ವೆಂಕಟ್ರಮಣ ಭಟ್ ಅಗರ್ತ, ಕಳೆಂಜ ಗ್ರಾ.ಪಂ. ಅಧ್ಯಕ್ಷ ಪ್ರಸನ್ನ, ಭಾ.ಜ.ಪ ಅಧ್ಯಕ್ಷ ಕೆ. ಜಯಂತ್ ಕೋಟ್ಯಾನ್, ಉದ್ಯಮಿ ನಾರಾಯಣ ಗೌಡ, ಉದ್ಯಮಿ ಎಚ್.ಆರ್.ಪಟೇಲ್, ದೀಪೋತ್ಸವ ಪ್ರಧಾನ ಸಂಚಾಲಕ ಮೋಹನ್ ಕುಮಾರ್, ಸ್ವಾಮಿ ಶ್ರೀ.ವಿ.ಸೇ. ಟ್ರಸ್ಟ್ ಟ್ರಸ್ಟಿ ರಮೇಶ್ ಪ್ರಭು, ಬದುಕು ಕಟ್ಟೋಣ ತಂಡದ ಸಂಚಾಲಕ ರಾಜೇಶ್ ಪೈ, ಡೀಕಯ್ಯ ಗೌಡ ಬಂಡೇರಿ ಉಪಸ್ಥಿತರಿದ್ದರು.

ನಂದಗೋಕುಲ ದೀಪೋತ್ಸವ ಸಂಚಲನಾ ಸಮಿತಿ ಅಧ್ಯಕ್ಷ ಪೂರಣ್ ವರ್ಮ ಸ್ವಾಗತಿಸಿದರು. ಟ್ರಸ್ಟ್‌ನ ಅಧ್ಯಕ್ಷ ಉಜಿರೆಯ ಡಾ| ಎಂ.ಎಂ ದಯಾಕರ್ ವಂದಿಸಿದರು. ಹರೀಶ್ ನೆರಿಯ, ಟ್ರಸ್ಟಿ ನವೀನ್ ನೆರಿಯ ನಿರೂಪಿಸಿದರು.

ಮೂರು ಹಸುಗಳಿಂದ ಆರಂಭಗೊಂಡು ಪ್ರಕೃತ 210 ಕ್ಕೂ ಹೆಚ್ಚು ಅನಾಥ ಗೋವುಗಳು ಇಲ್ಲಿ ನೆಮ್ಮದಿಯ ದಿನಗಳನ್ನು ಕಾಣುತ್ತಿವೆ. ಗೋಶಾಲೆಗೆ ಸ್ಲರಿ, ಕುಡಿಯುವ ನೀರಿನ‌ ಪಂಪ್, ಒಣ ಹುಲ್ಲು,‌ ಸಿಬಂದಿ ವೇತನ ಪ್ರತಿ ವರ್ಷ 60 ಲಕ್ಷ ವ್ಯಯಿಸುತ್ತಿದೆ ಎಂದು ಟ್ರಸ್ಟ್ ನ ಕಾರ್ಯದರ್ಶಿ ಸುಬ್ರಹ್ಮಣ್ಯ ಕುಮಾರ್ ಅಗರ್ತ ಪ್ರಾಸ್ತಾವಿಸಿ ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು