ಬೆಳ್ತಂಗಡಿ: ಕೊಕ್ಕಡ ಗ್ರಾಮದ ಸೌತಡ್ಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೆನ್ನುಮೂಳೆ ಮುರಿತಕ್ಕೊಳಗಾದವರ ಪುನಶ್ಚೇತನ ಕೇಂದ್ರ “ಸೇವಾಧಾಮ ” ವನ್ನು ಸಂಸ್ಥಾಪಿಸಿದ ಕನ್ಯಾಡಿಯ ಸೇವಾಭಾರತಿ ಸಮಾಜಸೇವಾ ಸಂಸ್ಥೆಗೆ ಉಡುಪಿ ಜಿಲ್ಲೆ ಬ್ರಹ್ಮಗಿರಿಯ ಕೆನರಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ . ವತಿಯಿಂದ 15 ಮಂದಿ ಬೆನ್ನುಮೂಳೆ ಮುರಿತಕ್ಕೊಳಗಾದವರಿಗೆ ಮೆಡಿಕಲ್ ಕಿಟ್ ನೀಡುವ ಬಾಬ್ತು ರೂ 3೦,೦೦೦ ಆರ್ಥಿಕ ನೆರವಿನ ಚೆಕ್ಕನ್ನು ಕೆನರಾ ಕ್ರೆ. ಕೋ-ಒಪ್ . .ಸೊಸೈಟಿ ಪರವಾಗಿ ಸಂಪತ್ ಭಟ್ ಮತ್ತು ಸಿಬಂದಿ ವರ್ಗ ಸೇವಾಭಾರತಿ ಅಧ್ಯಕ್ಷ ಕೆ.ವಿನಾಯಕ ರಾವ್ ಅವರಿಗೆ ಹಸ್ತಾಂತರಿಸಿದರು.
ಸೇವಾಭಾರತಿ ಅಧ್ಯಕ್ಷ ಕೆ.ವಿನಾಯಕ ರಾವ್ ಅವರು ಕೆನರಾ ಸೊಸೈಟಿ ಗೆ ಕೃತಜ್ಞತೆ ಸಲ್ಲಿಸಿದರು.