ಉಳ್ಳಾಲು: ಕ್ರಿಕೆಟ್ ಆಡುವಾಗ ಚೆಂಡು ಜೇನಿನಗೂಡಿಗೆ ಬಡಿದು ಅವುಗಳು ಆಟಗಾರರ ಮೇಲೆ ದಾಳಿ ಮಾಡಿದ ಘಟನೆ ಉಳ್ಳಾಲದ ಒಂಭತ್ತುಕೆರೆಯಲ್ಲಿ ನಡೆದಿದೆ. ಪರಿಣಾಮವಾಗಿ ಆಟಗಾರರೆಲ್ಲ ದಿಕ್ಕಾಪಾಲಾಗಿ ಪಲಾಯನ ಮಾಡಿದ್ದಾರೆ.
ಒಂಭತ್ತುಕೆರೆಯ ಅನಿಲ ಕಂಪೌಂಡ್ ಮೈದಾನದಲ್ಲಿ ಭಾನುವಾರ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ ಮಡೆಯುತ್ತಿತ್ತು. ಈ ವೇಳೆ ಎಸ್.ಆರ್.ಜಿ.ಟಿ ತಂಡದ ಮಹೇಶ್ ಹೊಡೆದ ಚೆಂಡು ತೆಂಗಿನ ಮರದತ್ತ ಚಿಮ್ಮಿ, ಅದರಲ್ಲಿದ್ದ ಜೇನುಗೂಡಿಗೆ ಬಡಿದಿದೆ. ಪರಿಣಾಮವಾಗಿ ನೊಣಗಳು ಆಟಗಾರರನ್ನು ಮುತ್ತಿದ್ದು, ಟೂರ್ನಿಯನ್ನು ರದ್ದುಗೊಳಿಸಿದ ಅವರು ಮೈದಾನ ಖಾಲಿ ಮಾಡಿದ್ದಾರೆ.