News Karnataka Kannada
Saturday, May 04 2024
ಮಂಗಳೂರು

ಬಂಟ್ವಾಳ: ಉತ್ತಮ ಸಾಹಿತ್ಯದಿಂದ ಸಂಸ್ಕಾರ ಸಾಧ್ಯ- ಶ್ರೀಕಲಾ ಕಾರಂತ ಅಳಿಕೆ

Bantwala: Sanskara is possible with good literature- Srikala Karanta Alak
Photo Credit : News Kannada

ಬಂಟ್ವಾಳ: “ಸಂಸ್ಕಾರದ ಬೆಳವಣಿಗೆಯಲ್ಲಿ ಸಾಹಿತ್ಯದ ಪಾತ್ರ ಮಹತ್ತರವಾದದ್ದು. ಉತ್ತಮ ಸಾಹಿತ್ಯದಿಂದ ಸಂಸ್ಕಾರ ಸಾಧ್ಯ. ಹಾಗಾಗಿ ಸಾಹಿತ್ಯದ ಮೂಲಕ ಮಕ್ಕಳನ್ನು ಸಂಸ್ಕಾರವಂತರನ್ನಾಗಿಸಬಹುದು ” ಎಂದು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಬಂಟ್ಟಾಳ ತಾಲೂಕು ಘಟಕ ಅಧ್ಯಕ್ಷರಾದ ಶ್ರೀಕಲಾ ಕಾರಂತ ಅಳಿಕೆಯವರು ಅಭಿಪ್ರಾಯಪಟ್ಟರು.

ನವಚೇತನ ಯುವಕ ಮಂಡಲ – ಸಾಲೆತ್ತೂರುನಲ್ಲಿ ಸಂಸ್ಕಾರ ಭಾರತೀ ಬಂಟ್ಟಾಳ ತಾಲೂಕು ಘಟಕದ ವತಿಯಿಂದ ಜರುಗಿದ ಸಂಸ್ಕಾರ ಸೌರಭ ಮಕ್ಕಳ ಶಿಬಿರದಲ್ಲಿ ಮಾತನಾಡಿದರು.

ಸಮಾರಂಭದ ಉದ್ಘಾಟನೆಯನ್ನು ಸವಿತಾ ಶೆಟ್ಟಿ ಪುಂಚಿಲ ನೆರವೇರಿಸಿದರು. ಬಂಟ್ಟಾಳ ತಾಲೂಕು ಉಪಾಧ್ಯಕ್ಷರಾದ ಡಾ| ವಾರಿಜ ನಿರ್ಬೈಲ್ ಶುಭ ಹಾರೈಸಿದರು. ಮಕ್ಕಳಿಗೆ ವಿವಿಧ ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಸಂಸ್ಕಾರ ಸಾಹಿತ್ಯದ ಅಗತ್ಯತೆಯನ್ನು ಸಾಹಿತಿ ಹಾಗೂ ರಾಜ್ಯ ಸಂಪನ್ಮೂಲ ವ್ಯಕ್ತಿ ಗೋಪಾಲಕೃಷ್ಣ ನೇರಳಕಟ್ಟೆ ವಿವರಿಸಿದರು. ಕಥನ ಕಾವ್ಯ ರಚನೆಯ ಬಗ್ಗೆ ಸಾಹಿತಿ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಜಯರಾಮ ಪಡ್ರೆಯವರು ಮಾಹಿತಿ ನೀಡಿದರು . ಜಿಲ್ಲಾ ಸಾಹಿತ್ಯ ವಿಭಾ ಪ್ರಮುಖ್ ಹಾಗೂ ಸಾಹಿತಿ ವಿಜಯಾ ಶೆಟ್ಟಿ ಸಾಲೆತ್ತೂರು ಕಾರ್ಯಕ್ರಮ ನಿರ್ವಹಿಸಿದರು.

ಮಕ್ಕಳ ವಿವಿಧ ಚಟುವಟಿಕೆಗಳನ್ನು ತುಳಸಿ ಮಂಚಿ, ರೇಖಾ ಮಂಚಿ, ಲಕ್ಷ್ಮೀ ಆಚಾರ್ಯ ಕುಕ್ಕಾಜೆ ಯವರು ನಿರ್ವಹಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು