News Karnataka Kannada
Monday, May 06 2024
ಮಂಗಳೂರು

ಬಂಟ್ವಾಳ: ಯುವ ಸಂಗಮ ಮೆಲ್ಕಾರ್ ವತಿಯಿಂದ ಪ್ರಧಾನಿ ಮೋದಿಯವರ ಚಿತ್ರ ಬಿಡಿಸುವ ಸ್ಪರ್ಧೆ

Bantwal: Winners of pm Modi's portrait painting contest selected
Photo Credit : By Author

ಬಂಟ್ವಾಳ: ಯುವ ಸಂಗಮ ಮೆಲ್ಕಾರ್ ವತಿಯಿಂದ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ ಮೋದಿಯವರ ಚಿತ್ರ ಬಿಡಿಸುವ ಸ್ಪರ್ಧೆಯ ವಿಜೇತರನ್ನು ಮೆಲ್ಕಾರಿನ ಬಿರ್ವ ಸೆಂಟರ್ ಸಭಾಂಗಣದಲ್ಲಿ ಆಯ್ಕೆ ಮಾಡಲಾಯಿತು.

ಚಿತ್ರ ಕಲಾವಿದರಾದ ವೈ.ಎನ್.ತಾರಾನಾಥ ಆಚಾರ್ಯ, ದೇರೆಬೈಲು ಕೊಂಚಾಡಿ ರಮ್ಯಾ ಸ್ಕೂಲ್ ಆಫ್ ಆರ್ಟ್ನ ಕಲಾವಿದೆ ರಮ್ಯಾಲಕ್ಷ್ಮೀಶ, ಮಚ್ಚೇಂದ್ರನಾಥ್ ಕಲ್ಲಡ್ಕ, ಮನೋಜ್ ಕನಪಾಡಿ ಅವರು ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಯುವ ಸಂಗಮದ ಅಧ್ಯಕ್ಷ ಶಿವಾನಂದ ಗುಡ್ಡೆಅಂಗಡಿ, ಗೌರವಾಧ್ಯಕ್ಷ ಎಂ.ಎನ್.ಕುಮಾರ್, ನಿವೃತ್ತ ಬ್ಯಾಂಕ್ ಅಧಿಕಾರಿ ಮಹೇಶ್, ಪುರಸಭಾ ಮಾಜಿ ಸದಸ್ಯ ದಾಮೋದರ ಮೆಲ್ಕಾರ್, ಯುವ ಸಂಗಮದ ಸದಸ್ಯರಾದ ಓಂಪ್ರಕಾಶ್, ವಿಠಲ್ ಶೆಣೈ, ಅಶೋಕ್ ಆಚಾರ್ಯ, ಪ್ರವೀಣ್, ಪ್ರಸಾದ್, ಅಶ್ವಥ್, ಶರ್ಮಿಳಾ ಅಶೋಕ್, ಜ್ಞಾನೇಶ್ವರ ಪ್ರಭು, ಶ್ರೀನಿವಾಸ ಪೂಜಾರಿ ಮೆಲ್ಕಾರ್, ಗುರುಪ್ರಸಾದ್ ಶೆಣೈ, ಶುಭಂ ನಾಯಕ್, ನಿಶಾಂತ್ ಮೆಲ್ಕಾರ್ ಮೊದಲಾದವರಿದ್ದರು.

ಯುವ ಸಂಗಮದ ಮಾಜಿ ಅಧ್ಯಕ್ಷ ಕಿಶೋರ್‌ಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ಹರೀಶ್ ಶೆಣೈ ವಂದಿಸಿದರು. ಶಂಕರ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಸುಮಾರು ೨೦೦ಕ್ಕೂ ಅಧಿಕ ಚಿತ್ರಗಳು ಸ್ಪರ್ಧೆಗೆ ಬಂದಿದ್ದವು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು