ಬಂಟ್ವಾಳ: ಯುವ ಸಂಗಮ ಮೆಲ್ಕಾರ್ ವತಿಯಿಂದ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ ಮೋದಿಯವರ ಚಿತ್ರ ಬಿಡಿಸುವ ಸ್ಪರ್ಧೆಯ ವಿಜೇತರನ್ನು ಮೆಲ್ಕಾರಿನ ಬಿರ್ವ ಸೆಂಟರ್ ಸಭಾಂಗಣದಲ್ಲಿ ಆಯ್ಕೆ ಮಾಡಲಾಯಿತು.
ಚಿತ್ರ ಕಲಾವಿದರಾದ ವೈ.ಎನ್.ತಾರಾನಾಥ ಆಚಾರ್ಯ, ದೇರೆಬೈಲು ಕೊಂಚಾಡಿ ರಮ್ಯಾ ಸ್ಕೂಲ್ ಆಫ್ ಆರ್ಟ್ನ ಕಲಾವಿದೆ ರಮ್ಯಾಲಕ್ಷ್ಮೀಶ, ಮಚ್ಚೇಂದ್ರನಾಥ್ ಕಲ್ಲಡ್ಕ, ಮನೋಜ್ ಕನಪಾಡಿ ಅವರು ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಯುವ ಸಂಗಮದ ಅಧ್ಯಕ್ಷ ಶಿವಾನಂದ ಗುಡ್ಡೆಅಂಗಡಿ, ಗೌರವಾಧ್ಯಕ್ಷ ಎಂ.ಎನ್.ಕುಮಾರ್, ನಿವೃತ್ತ ಬ್ಯಾಂಕ್ ಅಧಿಕಾರಿ ಮಹೇಶ್, ಪುರಸಭಾ ಮಾಜಿ ಸದಸ್ಯ ದಾಮೋದರ ಮೆಲ್ಕಾರ್, ಯುವ ಸಂಗಮದ ಸದಸ್ಯರಾದ ಓಂಪ್ರಕಾಶ್, ವಿಠಲ್ ಶೆಣೈ, ಅಶೋಕ್ ಆಚಾರ್ಯ, ಪ್ರವೀಣ್, ಪ್ರಸಾದ್, ಅಶ್ವಥ್, ಶರ್ಮಿಳಾ ಅಶೋಕ್, ಜ್ಞಾನೇಶ್ವರ ಪ್ರಭು, ಶ್ರೀನಿವಾಸ ಪೂಜಾರಿ ಮೆಲ್ಕಾರ್, ಗುರುಪ್ರಸಾದ್ ಶೆಣೈ, ಶುಭಂ ನಾಯಕ್, ನಿಶಾಂತ್ ಮೆಲ್ಕಾರ್ ಮೊದಲಾದವರಿದ್ದರು.
ಯುವ ಸಂಗಮದ ಮಾಜಿ ಅಧ್ಯಕ್ಷ ಕಿಶೋರ್ಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ಹರೀಶ್ ಶೆಣೈ ವಂದಿಸಿದರು. ಶಂಕರ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಸುಮಾರು ೨೦೦ಕ್ಕೂ ಅಧಿಕ ಚಿತ್ರಗಳು ಸ್ಪರ್ಧೆಗೆ ಬಂದಿದ್ದವು.