News Karnataka Kannada
Friday, May 10 2024
ಮಂಗಳೂರು

ಬಂಟ್ವಾಳ ತಾಲೂಕು ಮಟ್ಟದ ಮಹಾವೀರ ಜಯಂತಿ ಆಚರಣೆ

Bantwal
Photo Credit : News Kannada

ಬಂಟ್ವಾಳ: ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಭಾನುವಾರ ಬಂಟ್ವಾಳ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಮಹಾವೀರ ಜಯಂತಿ ಆಚರಣೆಯನ್ನು ಆಚರಿಸಲಾಯಿತು.

ತಹಶೀಲ್ದಾರ್ ಎಸ್.ಬಿ ಕೂಡಲಗಿ ಅವರು ದೀಪ ಪ್ರಜ್ವಲಿಸಿ ಸರ್ವ ಧರ್ಮ ಸಮಭಾವ ಇರುವ ನಮ್ಮ ದೇಶದಲ್ಲಿ ಅಹಿಂಸೆಯ ಮೂಲಕ ಸಮನ್ವತೆಯಿಂದ ಬಾಳ ಬಹುದಾಗಿದೆ ಎಂದು ಹೇಳಿ ಸರ್ಕಾರದ ವತಿಯಿಂದ ಆಚರಿಸಲ್ಪಡುವ ಮಹಾವೀರ ಜಯಂತಿಗೆ ಶುಭ ಕೋರಿದರು.

ಇದೇ ಸಂದರ್ಭದಲ್ಲಿ ಬಂಟ್ವಾಳ ಜೈನ್ ಮಿಲನ್ ಅಧ್ಯಕ್ಷರಾದ ವೀರ್ ದೀಪಕ್ ಕುಮಾರ್ ಅವರು ಮಾತನಾಡಿ ಬದುಕು,ಬದುಕಲು ಬಿಡು ಎಂಬ ಸಂದೇಶವನ್ನು ವಿಶ್ವಕ್ಕೆ ಸಾರಿದ ಭಗವಾನ್ ಮಹಾವೀರರ ಸಂದೇಶಗಳು ಪ್ರಸ್ತುತ.ಆಹಿಂಸೆಯಿಂದ ಸುಖ , ತ್ಯಾಗದಿಂದ ಶಾಂತಿ ಈ ಸಂದೇಶವು ಎಂದಿಗೂ ಸತ್ಯವಾಗಿರುತ್ತದೆ ಇದನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಭಾರತೀಯ ಜೈನ್ ಮಿಲನ್ ಮಂಗಳೂರು ವಲಯ ಕಾರ್ಯದರ್ಶಿ ವೀರ್ ಸುಭಾಷ್ಚಂದ್ರ ಜೈನ್, ವೀರಾಂಗನೆ ವಿಜಯ ಕುಮಾರಿ, ಇಂದ್ರ, ವೀರಾಂಗನೆ ಸನ್ಮತಿ ಜಯಕೀರ್ತಿ, ವೀರಾಂಗನೆ ಗೀತಾ ಜಿನಚಂದ್ರ, ವೀರಾಂಗನೆ ಚಂದನಾ ಬ್ರಿಜೇಶ್ ಬಾಳ್ತಿಲ,ವೀರ್ ಹೇಮಂತ್ ಜೈನ್,ವೀರ್ ಜಿನೇಂದ್ರ ಜೈನ್, ವೀರ್ ಅಜಿತ್ ಕುಮಾರ್,ವೀರ್ ರಾಜೇಂದ್ರ ಜೈನ್,ವೀರ್ ಪ್ರವೀಣ್ ಕುಮಾರ್,ವೀರ್ ಸುರೇಶ್ ಜೈನ್,ವೀರ್ ಬೋಜರಾಜ್ ಜೈನ್ ವಗ್ಗ  ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿಷಯ ನಿರ್ವಾಹಕ ವಿಷು ಕುಮಾರ್  ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು