ಬಂಟ್ವಾಳ: ತಾಲೂಕಿನ ಸರಪಾಡಿ ಸಮೀಪದ ಅಲ್ಲಿಪಾದೆ ಎಂಬಲ್ಲಿ ಸಂತ ಜೋನ್ ಚರ್ಚ್ ಬಳಿ ಸರಕಾರಿ ಜಾಗದಲ್ಲಿ ಸ್ಥಾಪಿಸಲಾದ ಏಸು ಪ್ರತಿಮೆಯನ್ನು ತೆರವು ಮಾಡಲಾಗಿದೆ.
ಸರಕಾರಿ ಜಾಗದಲ್ಲಿ ಏಸು ಪ್ರತಿಮೆ ಸ್ಥಾಪಿಸಿ ಅದಕ್ಕೆ ಆವರಣ ಗೋಡೆ ನಿರ್ಮಿಸಲಾಗಿತ್ತು. ಹಿಂದೂ ಜಾಗರಣ ವೇದಿಕೆ ಸರಪಾಡಿ ವಲಯ ಈ ಬಗ್ಗೆ ತಾಲೂಕು ದಂಡಾಧಿಕಾರಿಗೆ ದೂರು ನೀಡಿತ್ತು. ಮತ್ತು ಒಂದು ವಾರದೊಳಗೆ ತೆರವು ಮಾಡಲು ಆಗ್ರಹಿಸಿತ್ತು. ಇದರ ಬೆನ್ನಲ್ಲೆ ಪ್ರತಿಮೆ ತೆರವು ಮಾಡಲಾಗಿತ್ತು ಮತ್ತು ಆವರಣ ಗೋಡೆಯನ್ನು ತೆರವು ಮಾಡಲಾಯಿತು.