News Karnataka Kannada
Saturday, May 04 2024
ಮಂಗಳೂರು

ಬಂಟ್ವಾಳ: ಪ್ರಧಾನಿ ಆಶಯಕ್ಕೆ ಪೂರಕ ಬಜೆಟ್, ಶಾಸಕ ರಾಜೇಶ್ ನಾಯ್ಕ್

Under Rajesh Naik's rule, communal hatred has been removed and harmony has been created in Bantwal.
Photo Credit : News Kannada

ಬಂಟ್ವಾಳ: ದೇಶದ ಅಮೃತಕಾಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಶಯಗಳಿಗೆ ಪೂರಕವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಲ್ಲರನ್ನು ಒಳಗೊಳ್ಳುವ ಉತ್ತಮ ಬಜೆಟ್ ಮಂಡಿಸಿದ್ದಾರೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಹಕಾರ ಬ್ಯಾಂಕ್‌ಗಳ ಮೂಲಕ ನೀಡುವ ಶೂನ್ಯ ಬಡ್ಡಿದರದ ಸಾಲವನ್ನು ೫ ಲಕ್ಷ ರೂ.ವರೆಗೆ ಹೆಚ್ಚಳ ಮಾಡಿರುವುದು ರೈತರಿಗೆ  ಅನುಕೂಲ ಮಾಡಿಕೊಟ್ಟಿದೆ. ೫೬ ಲಕ್ಷ ಸಣ್ಣ ಹಾಗೂ ಅತಿಸಣ್ಣ ರೈತ ಕುಟುಂಬಗಳಿಗೆ ವಿಮಾ ಯೋಜನೆ ಕಲ್ಪಿಸಿರುವುದು ಕೃಷಿಕರ ಮೇಲಿನ ಸರಕಾರದ ಕಾಳಜಿಯ ದ್ಯೋತಕವಾಗಿದೆ.

ವಿದ್ಯಾರ್ಥಿನಿಯರಿಗೆ ಉಚಿತ ಬಸ್‌ಪಾಸ್, ಮಹಿಳಾ ಕಾರ್ಮಿಕರಿಗೆ ೫೦೦ ರೂ. ಸಹಾಯ ಧನ, ೧೦ ಸಾವಿರ ವಸತಿ ರಹಿತ ಮೀನುಗಾರರಿಗೆ ವಸತಿ ಸೌಲಭ್ಯ, ಮೀನುಗಾರಿಕಾ ದೋಣಿಗಳಿಗೆ ಡೀಸೆಲ್ ಪೂರೈಕೆ ಬಜೆಟ್‌ನ ಉತ್ತಮ ಅಂಶ. ಪಶ್ಚಿಮವಾಹಿನಿ ಎರಡನೇ ಹಂತದಲ್ಲಿ ೩೭೮ ಕೋಟಿ ರೂ. ಮೊತ್ತದ ಕಾಮಗಾರಿ ಕರಾವಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು