News Karnataka Kannada
Tuesday, April 30 2024
ಮಂಗಳೂರು

ಬಂಟ್ವಾಳ: ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿಯ ವಿವಿಧೆಡೆ ಅಪಘಾತ, ರಾಜೇಶ್ ನಾಯ್ಕ ಭೇಟಿ

Rajesh Naik meets with accidents at various places on Punjalakatte National Highway
Photo Credit : By Author

ಬಂಟ್ವಾಳ:  ಬಿ.ಸಿ.ರೋಡು ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿಯ ವಿವಿಧೆಡೆ ನಿರಂತರ ಅಪಘಾತ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ಉಳಿಪ್ಪಾಡಿ ಗುರುವಾರ ಸಂಜೆ ಸಂದರ್ಶಿಸಿ, ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಕುರಿತು ಚರ್ಚಿಸಿದರು.

ಪುಂಜಾಲಕಟ್ಟೆಗೆ ತೆರಳುವ ಹೆದ್ದಾರಿಯ ಮೂಡುಬಿದಿರೆ ಕಡೆಗೆ ತೆರಳುವ ಜಾಗ ಮತ್ತು ಬಂಟ್ವಾಳ ಪೇಟೆಯಿಂದ ಹೈವೆ ಸಂಧಿಸುವ ಜಾಗ ಹಾಗೂ ಚಂಡ್ತಿಮಾರ್ ಪ್ರದೇಶದ ಅಪಘಾತವಾಗುವ ಪ್ರದೇಶಗಳಿಗೆ ಅಧಿಕಾರಿಗಳೊಂದಿಗೆ  ಅವರು ಭೇಟಿ ನೀಡಿದರು.

ಪ್ರತಿದಿನವೆಂಬಂತೆ ಸಣ್ಣಪುಟ್ಟ ಅಪಘಾತಗಳು ಇಲ್ಲಿ ನಡೆಯುತ್ತಿದ್ದು, ಕೆಲವೊಮ್ಮೆ ಪ್ರಾಣಹಾನಿಯೂ ಸಂಭವಿಸುತ್ತದೆ. ಈ ಹಿನ್ನೆಲೆಯಲ್ಲಿ ಕಾನೂನಾತ್ಮಕವಾಗಿ ಬೇಕಾದ ಎಲ್ಲ ಮಾರ್ಗೋಪಾಯಗಳನ್ನು ಕೈಗೊಳ್ಳುವಂತೆ ಸೂಚಿಸಿದ ಶಾಸಕ ರಾಜೇಶ್ ನಾಯ್ಕ, ವಾಹನ ಸವಾರರಿಗೆ ಎಚ್ಚರಿಕೆಯ ದೃಷ್ಟಿಯಿಂದ ಸೂಚನ ಫಲಕಗಳು, ಸಿಗ್ನಲ್ ಲೈಟ್, ರಿಪ್ಲೆಕ್ಟರ್ ಅಳವಡಿಕೆ, ಸೈನ್ ಬೋರ್ಡ್ ಅಳವಡಿಕೆ ಸಹಿತ ಹೆದ್ದಾರಿ ನಿಯಮಗಳಿಗನುಸಾರವಾಗಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಬುಡಾ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಡಿವೈಎಸ್ಪಿ ಪ್ರತಾಪ್ ಸಿಂಗ್ ಥೋರಟ್, ಕೆಎಸ್ಸಾರ್ಟಿಸಿ ಡಿಪ್ಲೊ ಮ್ಯಾನೇಜರ್ ಶ್ರೀಶ ಭಟ್, ಪ್ರಭಾರ ಎಇಇ ಮಹಾಬಲ ನಾಯಕ್‌, ಸಹಾಯಕ ಎಂಜಿನಿಯರ್ ಕೀರ್ತಿ ಅಮೀನ್‌, ನಗರ ಪೊಲೀಸ್ ಠಾಣಾ ಎಸೈ, ಅವಿನಾಶ್, ಟ್ರಾಫಿಕ್ ಠಾಣಾ ಎಸ್ಪಿ ಮೂರ್ತಿ, ಗುತ್ತಿಗೆದಾರ ಕಂಪನಿಯ ದಾಮೋದರ್, ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಪ್ರಮುಖರಾದ ರವೀಶ್ ಶೆಟ್ಟಿ ಕರ್ಕಳ, ಡೊಂಬಯ ಅರಳ, ಪುರುಷೋತ್ತಮ ಶೆಟ್ಟಿ ವಾಮದಪದವು, ಸುದರ್ಶನ ಬಜ, ವಿಶ್ವನಾಥ ಚಂಡ್ತಿಮಾರ್, ಗಣೇಶ್ ರೈ ಮಾಣಿ ಮತ್ತಿತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು