News Karnataka Kannada
Monday, April 29 2024
ಮಂಗಳೂರು

ಬಂಟ್ವಾಳ: ಭ್ರಷ್ಟಾಚಾರ ನಿಗ್ರಹ ದಳದ ವತಿಯಿಂದ ಸಾರ್ವಜನಿಕ ಸಂಪರ್ಕ ಸಭೆ

Anti-Corruption Bureau holds public relations meeting
Photo Credit : By Author
ಬಂಟ್ವಾಳ: ಪಶ್ಚಿಮ ವಲಯ ಭ್ರಷ್ಟಾಚಾರ ನಿಗ್ರಹ ದಳದ  ಪೊಲೀಸ್ ಅಧೀಕ್ಷಕರು ಹಾಗೂ ಎಸಿಬಿ ಪೊಲೀಸ್ ಠಾಣಾ ಡಿವೈಎಸ್ಪಿಯವರ ಸಾರ್ವಜನಿಕ ಸಂಪರ್ಕ ಸಭೆ ಜು. ೨೦ರಂದು ಸಂಜೆ ಬಂಟ್ವಾಳ ತಾ.ಪಂ.ನ ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ನಡೆಯಿತು.
ಭ್ರಷ್ಟಾಚಾರ ನಿಗ್ರಹ ದಳದ ವ್ಯಾಪ್ತಿಯಲ್ಲಿ ಬರುವ ಕೆಲಸಗಳನ್ನು ಮಾತ್ರ ಅಧಿಕಾರಿಗಳು ಮಾಡಲು ಸಾಧ್ಯ ವಿದೆ. ಅದರ ಹೊರತಾಗಿ ವ್ಯಾಪ್ತಿಯ ಹೊರಗಿರುವ ವಿಷಯಗಳಿಗೆ ಸಂಬಂಧಿಸಿದಂತೆ  ತನಿಖೆ ಮಾಡಲು, ಕ್ರಮಕೈಗೊಳ್ಳಲು ಸಾಧ್ಯವಿಲ್ಲ. ಆಡಳಿತಾತ್ಮಕ ವಿಚಾರಗಳಿಗೆ ನಾವು ತನಿಖೆ ಮಾಡಲು ಸಾಧ್ಯವಿಲ್ಲ, ಲಂಚ ಕೇಳಿದ ದೂರುಗಳು, ಅಥವಾ ಇನ್ನಿತರ ಡಿಮ್ಯಾಂಡುಗಳು ಯಾರಾದರೂ  ಮಾಡಿದರೆ ನಮಗೆ ದೂರು‌ ನೀಡಿ ತನಿಖೆ ಕ್ರಮಕೈಗೊಳ್ಳುತ್ತೇವೆ ಎಂದು ಅವರು ಪ್ರಶ್ನೆಯೊಂದಕ್ಕೆ  ಜಿಲ್ಲಾ ಎಸ್‌.ಪಿ.ಸಿ.ಎ.ಸೈಮಂಡ್ಸ್ ಉತ್ತರಿಸಿದರು.
ಸಾರ್ವಜನಿಕರು ಹಾಗೂ  ಸರಕಾರಿ ನೌಕರರು ಕೂಡ ಭ್ರಷ್ಟಾಚಾರ ನಿಗ್ರಹದಳದ ವ್ಯಾಪ್ತಿಗೆ ಬರುವ ವಿಚಾರದಲ್ಲಿ ದೂರು ನೀಡಬಹುದು.
ಜಾಗ ಪಡೆದುಕೊಂಡು ಹಲವಾರು ಸಮಯವಾದರೂ ಆರ್.ಟಿ.ಸಿ.ಮಾಡಿಕೊಟ್ಟಿಲ್ಲ, ಈ ಬಗ್ಗೆ ದೂರು ನೀಡಿದ್ದೇನೆ, ಮಾಹಿತಿ ಹಕ್ಕಿನಲ್ಲಿಯೂ ಹಾಕಿದ್ದೇನೆ ,ಆದರೆ ಆರ್.ಟಿ.ಸಿ‌. ಸಿಕ್ಕಿಲ್ಲ ಎಂಬ ದೂರನ್ನು ಶಬೀರ್ ಆಹಮ್ಮದ್   ಎ.ಸಿ.ಬಿ ಗೆ ನೀಡಿದರು. ಇದೇ ರೀತಿ ಅನೇಕ ದೂರುಗಳಿದ್ದರು ದಳದ ವ್ಯಾಪ್ತಿಗೆ ಬರುವ ದೂರು ಯಾವುದು ಬಂದಿರಲಿಲ್ಲ.
ಲಂಚ ವಿಚಾರಕ್ಕೆ ಸಂಬಂಧಿಸಿದಂತೆ ದೂರುಗಳು ಇಲ್ಲಿ ಇರದಿದ್ದರೂ ಕೂಡ, ಸಾರ್ವಜನಿಕ ರಿಗೆ ಎಸಿಬಿ ಎಂಬ ಇಲಾಖೆ ಇದೆ ಎಂಬ ವಿಚಾರ ತಿಳಿಯಬೇಕು ಜೊತೆಗೆ ಮುಂದಿನ ದಿನಗಳಲ್ಲಿ ಈ ಇಲಾಖೆ ಜೊತೆ ಸಾರ್ವಜನಿಕ ರು ಯಾವ ರೀತಿಯ ದೂರುಗಳುನ್ನು ನೀಡಬಹುದು ಎಂಬ ವಿಚಾರದಲ್ಲಿ ಮಾಹಿತಿ ಯನ್ನು ನೀಡಿದರು.
ಈ ಸಭೆಯಲ್ಲಿ  ವಿಶೇಷ ಕಾನೂನು ಅಧಿಕಾರಿ ಜುಡಿತ್ ಓಲ್ಗಾ, , ಇನ್ಸ್ ಪೆಕ್ಟರ್ ಶ್ಯಾಮಸುಂದರ, ಎಚ್.ಸಿ.ಹರಿಪ್ರಸಾದ್ ಹಾಗೂ ಉಮೇಶ್ ಉಪಸ್ಥಿತರಿದ್ದರು.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು