ಬಂಟ್ವಾಳ: ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘ ನಿಯಮಿತವು 2021-2022ನೇ ಸಾಲಿನಲ್ಲಿ 8.33 ಕೋಟಿ ರೂ. ವ್ಯವಹಾರ ನಡೆಸಿ, 21 ಲಕ್ಷ ರೂ.ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ. ರವೀಂದ್ರ ಕಂಬಳಿ ತಿಳಿಸಿದ್ದಾರೆ.
ಬಿ.ಸಿ.ರೋಡಿನ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಮಂಗಳವಾರ ನಡೆದ ನಿಯಮಿತದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಈ ಸಂದರ್ಭದಲ್ಲಿ ಸಂಘದ ಸದಸ್ಯರಿಗೆ ಶೇ.15 ಡಿವಿಡೆಂಟ್ ನ್ನು ಘೋಷಿಸಿದರು.
ಸಂಘವು ಪ್ರಸ್ತುತ 21.45 ಕೋಟಿ ಠೇವಣಿ ಹೊಂದಿದ್ದು,23.05 ಕೋಟಿ ಪಾಲು ಬಂಡವಾಳವಿದೆ, ಯಾವುದೇ ಬ್ಯಾಂಕಿನಲ್ಲಿ ಸಾಲವನ್ನು ಹೊಂದಿರುವುದಿಲ್ಲ ,ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಸಹಕಾರಿ ಸಂಘದಲ್ಲಿ 18.47ಕೋಟಿ ರೂ ಠೇವಣಿ ಹೂಡಿದೆ ಎಂದು ವಿವರಿಸಿದರು.
ಸಂಘವು 2021-2022ನೇ ಸಾಲಿನಲ್ಲಿ ಲೆಕ್ಕಪರಿಶೋಧನಾ ವರದಿಯಲ್ಲು ‘ಎ’ ವರ್ಗವನ್ನು ಪಡೆದುಕೊಂಡಿದ್ದು,ತಾಲೂಕಿನ 60℅ ಪಡಿತರ ಸಾಮಾಗ್ರಿಗಳನ್ನು ನ್ಯಾಯಬೆಲೆ ಅಂಗಡಿಗಳಿಗೆ ವಿತರಿಸುತ್ತಿದೆ, ಬಂಟ್ವಾಳ ಶಾಖೆಯಲ್ಲಿ ರೈತರ ಅನುಕೂಲಕ್ಕಾಗಿ ಕ್ರಿಮಿನಾಶಕ ,ಕೃಷಿ ಉಪಕರಣ ಹಾಗೂ ಇನ್ನಿತರ ಸಾಮಾಗ್ರಿಗಳನ್ನು ಮಾರಾಟ ಮಾಡುವ ವ್ಯವಸ್ಥೆಯನ್ನು ಹೊಂದಿರುತ್ತದೆ.
ಬಂಟ್ವಾಳದಲ್ಲಿ ಬ್ಯಾಂಕಿಂಗ್ ವ್ಯವಹಾರ ಹಾಗೂ ನ್ಯಾಯಬೆಲೆ ಅಂಗಡಿಯ ಮುಖಾಂತರ ಜನರಿಗೆ ಪಡಿತರ ವಿತರಣಾ ವ್ಯವಸ್ಥೆಯನ್ನು ಹೊಂದಿದೆ ಎಂದು ಅಧ್ಯಕ್ಷ ರವೀಂದ್ರ ಕಂಬಳಿ ತಿಳಿಸಿದರು.ಬಿ.ಸಿ.ರೋಡ್ ಮತ್ತು ತುಂಬೆಯಲ್ಲಿ ಸ್ವಂತ ಕಟ್ಟಡ ಖರೀದಿಸಿ ಬಾಡಿಗೆಗೆ ನೀಡಲಾಗಿದೆ.ಫರಂಗಿಪೇಟೆ ಶಾಖೆಯಲ್ಲಿ ವಿವಿಧ ಸಾಲಸೌಲಭ್ಯ,ಇ-ಸ್ಟಾಂಪಿಂಗ್ ಹಾಗೂ ನ್ಯಾಯಬೆಲೆ ಅಂಗಡಿ ಮೂಲಕ ಪಡಿತರ ವಿತರಣಾ ವ್ಯವಸ್ಥೆಯು ಹೊಂದಿದೆ ಎಂದು ಅವರು ಹೇಳಿದರು.
ಸಂಘದ ಉಪಾಧ್ಯಕ್ಷೆ ಶಶಿಕಲಾ ಉಡುಪ,ನಿರ್ದೇಶಕರಾದ ಉಮೇಶ್ ಪೂಜಾರಿ,ರಾಜೇಶ್ ಶೆಟ್ಟಿ,ಜ್ಞಾನೇಶ್ವರ ಪ್ರಭು,ಮನೋರಾಜ್ ಎ. ,ಪಿ.ವೆಂಕಟೇಶ್ ನಾವಡ,ರೋಹಿನಾಥ್ ಕೆ.,ಬಿ.ಟಿ.ನಾರಾಯಣ ಭಟ್, ಸುಂದರ ಭಂಡಾರಿ, ಪದ್ಮನಾಭ ಕಿದೆಬೆಟ್ಟು, ರತ್ನ, ಪೂವಪ್ಪ, ರಾಮನಾಯ್