News Karnataka Kannada
Sunday, April 28 2024
ಮಂಗಳೂರು

ಎಜೆ ಆಸ್ಪತ್ರೆಗೆ ಎಕ್ಸಲೆನ್ಸ್ ಇನ್ ಸೂಪರ್ ಸ್ಪೆಷಾಲಿಟಿ ಹೆಲ್ತ್ ಕೇರ್ ಪ್ರಶಸ್ತಿ

New Project (34)
Photo Credit : News Kannada

ಮಂಗಳೂರು: 2023 ವರ್ಷಕ್ಕೆ ತೆರೆ ಬೀಳುತ್ತಿದ್ದಂತೆ ಮಂಗಳೂರಿನ ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಭಾರತದ ಪ್ರಮುಖ ಮಾಧ್ಯಮ ಸಂಸ್ಥೆಗಳಿಂದ ಗೌರವಾನ್ವಿತ ಮನ್ನಣೆಗಳೊಂದಿಗೆ, ಅಸಾಧಾರಣ ಸಾಧನೆಗಳಿಂದ ಗುರುತಿಸಲ್ಪಟ್ಟ ವರ್ಷವಾಗಿದೆ.

ಹೆಸರಾಂತ ಲೋಕೋಪಕಾರಿ, ಉದ್ಯಮಿ ಮತ್ತು ಶಿಕ್ಷಣ ತಜ್ಞ ಡಾ.ಎ.ಜೆ.ಶೆಟ್ಟಿ ಅವರು 2001 ರಲ್ಲಿ ಸ್ಥಾಪಿಸಿದ ಆರೋಗ್ಯ ಸಂಸ್ಥೆಗಳು, ಆರೋಗ್ಯ ಕ್ಷೇತ್ರಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಳಿಗಾಗಿ ಹೆಮ್ಮೆಯಿಂದ ಪುರಸ್ಕಾರಗಳನ್ನು ಪಡೆಯಿತು.ವರ್ಷದುದ್ದಕ್ಕೂ ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಗಮನಾರ್ಹವಾಗಿ ಔಟ್‌ಲುಕ್ ಇಂಡಿಯಾದಿಂದ 7ನೇ ಅತ್ಯುತ್ತಮ ಆಂಕೊಲಾಜಿ ಆಸ್ಪತ್ರೆ ಮತ್ತು 17ನೇ ಅತ್ಯುತ್ತಮ ಹೃದ್ರೋಗ ಆಸ್ಪತ್ರೆ ಎಂದು ಶ್ರೇಯಾಂಕ ಪಡೆದಿದೆ. ಹೆಚ್ಚುವರಿಯಾಗಿ, ಈ ಸಂಸ್ಥೆಯು ಟೈಮ್ಸ್ ಗ್ರೂಪ್‌ನಿಂದ “ಎಕ್ಸಲೆನ್ಸ್ ಇನ್ ಸೂಪರ್ ಸ್ಪೆಷಾಲಿಟಿ ಹೆಲ್ತ್ ಕೇರ್ – ಕರ್ನಾಟಕ” ಪ್ರಶಸ್ತಿ 2023 ಯಿಂದ ಗೌರವಿಸಲ್ಪಟ್ಟಿದೆ. ಈ ಪ್ರತಿಷ್ಠಿತ ಪ್ರಶಸ್ತಿಯನ್ನು 30 ನವೆಂಬರ್ 2023 ರಂದು ಬೆಂಗಳೂರಿನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಗೌರವಾನ್ವಿತ ನಟರಾದ ಸುನೀಲ್ ಶೆಟ್ಟಿ ಯವರಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಾ.ಅಮಿತಾ ಮಾರ್ಲ ಮತ್ತು ಡಾ.ಪ್ರಶಾಂತ್ ಮಾರ್ಲ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು. 430 ಹಾಸಿಗೆಗಳುಳ್ಳ ಎ.ಜೆ. ಆಸ್ಪತ್ರೆಯು ರೋಗಿಗಳ ಅನುಕೂಲಕ್ಕಾಗಿ ನಿರಂತರವಾಗಿ ನೈತಿಕ ಮತ್ತು ಕೈಗೆಟುಕುವ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಿ ಬಹು-ವಿಶೇಷ ಸೌಲಭ್ಯವನ್ನು ಒಂದೇ ಸೂರಿನಡಿ ಸ್ಥಾಪಿಸಲಾಗಿದೆ.

ಎ.ಜೆ. ಆಸ್ಪತ್ರೆಯು ಅದರ ಪ್ರಾರಂಭದಿಂದಲೂ, ತಾಂತ್ರಿಕ ಪ್ರಗತಿಯಲ್ಲಿ ಮುಂಚೂಣಿಯಲ್ಲಿದ್ದು, ನಿರಂತರವಾಗಿ ತನ್ನ ವಿಭಾಗಗಳನ್ನು ವಿಸ್ತರಿಸುತ್ತಿದೆ ಮತ್ತು ವಿಶ್ವ ದರ್ಜೆಯ ಸೇವೆಗಳನ್ನು ನೀಡಲು ಪರಿಣಿತ ವೈದ್ಯರು ಮತ್ತು ಸಹಾಯಕ ಸಿಬ್ಬಂದಿಯನ್ನು ನೇಮಿಸಿಕೊಳ್ಳುತ್ತಿದೆ. ಉತ್ಕೃಷ್ಟತೆಗೆ ಸಮರ್ಪಿಸುವ ಸಂಸ್ಥೆಗಳು ವಿವಿಧ ಗುಣಮಟ್ಟದ ಪ್ರಮಾಣೀಕರಣ ಏಜೆನ್ಸಿಗಳಿಂದ ಮನ್ನಣೆಯನ್ನು ಗಳಿಸಿ, ಕರಾವಳಿ ಕರ್ನಾಟಕದಲ್ಲಿ ತನ್ನ ವಿಶಿಷ್ಟ ಸ್ಥಾನವನ್ನು ಗಟ್ಟಿಗೊಳಿಸಿದೆ. ಎ.ಜೆ. ಆಸ್ಪತ್ರೆಯು ತನ್ನ ಗುಣಮಟ್ಟದ ಆರೈಕೆ, ನೈತಿಕ ಅಭ್ಯಾಸಗಳು ಮತ್ತು ರೋಗಿಗಳ ಸುರಕ್ಷತೆಗೆ ಮಹತ್ವದ ಒತ್ತು ಕೊಟ್ಟಿರುವುದರಿಂದ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾದ ಪ್ರತಿಷ್ಠಿತ 5 ನೇ ಆವೃತ್ತಿಯ NABH ಮಾನ್ಯತೆ ಸೇರಿದಂತೆ ಗಮನಾರ್ಹ ಮಾನ್ಯತೆಗಳಿಗೆ ಕಾರಣವಾಗಿವೆ.

ಸಂಸ್ಥೆಯು ಅಸೋಸಿಯೇಶನ್ ಆಫ್ ಹೆಲ್ತ್‌ಕೇರ್ ಪ್ರೊವೈಡರ್ಸ್ ಇಂಡಿಯಾ ಮತ್ತು ರಾಮಕೃಷ್ಣ ಬಜಾಜ್ ಕ್ವಾಲಿಟಿ ಅವಾರ್ಡ್ಸ್‌ನಿಂದ ಅನೇಕ ವಾರ್ಷಿಕ ಪ್ರಶಸ್ತಿಗಳನ್ನು ಹೊಂದಿದ್ದು, ಆರೋಗ್ಯ ಉದ್ಯಮದಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ದೃಢಪಡಿಸುತ್ತದೆ. ಎ.ಜೆ.ಆಸ್ಪತ್ರೆಯು 2022 ರಲ್ಲಿ ನ್ಯೂಸ್ 18 ನಿಂದ ಕರ್ನಾಟಕದ ಅತ್ಯುತ್ತಮ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಎಂಬ ಪ್ರಶಸ್ತಿಯನ್ನು ಪಡೆದಿದೆ, ಇದನ್ನು ಕರ್ನಾಟಕ ಸರ್ಕಾರದ ಪ್ರಸ್ತುತ ಆರೋಗ್ಯ ಮಂತ್ರಿ ದಿನೇಶ್ ಗುಂಡೂರಾವ್ ಅವರು ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು