ಮಂಗಳೂರು : ನಗರದ ಮೂಲ್ಕಿ ಬಸ್ ನಿಲ್ದಾಣ ಪಕ್ಕದ ಪೆಟ್ರೋಲ್ ಪಂಪ್ ಎದುರು ನಡೆದ ಮುನ್ನ ಬಿಟ್ಟು ಗ್ರಾಮದ ಉಲ್ಲಂಜೆ ವಾಸಿ ಹರೀಶ್ ಸಾಲ್ಯಾನ್ ಕೊಲೆ ಪ್ರಕರಣವನ್ನು ಮುಲ್ಕಿ ಪೊಲೀಸರು ಭೇದಿಸಿದ್ದಾರೆ .
ಈ ಪ್ರಕರಣದ ತನಿಖೆಯನ್ನು ಮುಂದುವರಿಸಿದ ವೇಳೆ ಆರೋಪಿಯ ಬಗ್ಗೆ ಮಾಹಿತಿ ಸಂಗ್ರಹಿಸಿದ ಮೂಲ್ಕಿ ಪೊಲೀಸ್ ನಿರೀಕ್ಷಕರಾದ ಕುಸುಮಾಧರ್ ಕೊಲೆ ಮಾಡಿದ ಆರೋಪಿಯನ್ನು ಬಂಧಿಸಿದ್ದಾರೆ .
ತಮಿಳುನಾಡು ಮೂಲದ ಮುರುಗನ್ ಆರೋಪಿಯಾಗಿದ್ದು ಹಣಕಾಸಿನ ವ್ಯವಹಾರದ ದ್ವೇಷದಿಂದ ಹರೀಶ್ ಸಾಲ್ಯಾನ್ ಅವರನ್ನು ಕಲ್ಲಿನಿಂದ ತಲೆಗೆ ಜಜ್ಜಿ ಕೊಲೆ ಮಾಡಿ ಬಳಿಕ ಪರಾರಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ