ಮಂಗಳೂರು: ಸೈಂಟ್ ಆಗ್ನೇಸ್ ಪದವಿ ಪೂರ್ವಕಾಲೇಜಿನ ಮಹಿಳಾ ಸಭಾ‘ಅಭಯ’, ‘ಫ್ಲೈ ಹೈ’ ಚಾರಿಟೀಬಲ್ ಟ್ರಸ್ಟ್ ಹಾಗೂ ‘ಪ್ರಿವಿಂಕಲ್’ ಲೇಡಿಸ್ ಬ್ಯೂಟಿ ಪಾರ್ಲರ್ ಸಹಯೋಗದೊಂದಿಗೆ ನಡೆಸಲಾದ ಕೇಶದಾನ ಅಭಿಯಾನದಲ್ಲಿ ಮಾತನಾಡಿದ ಪ್ರಸೂತಿ ತಜ್ಞೆ ಡಾ| ಸಂಗೀತಾ, ಹಳ್ಳಿಗಿಂತ ನಗರ ಪ್ರದೇಶಗಳಲ್ಲಿ ಕಾನ್ಸರ್ ಪ್ರಕರಣಗಳು ಹೆಚ್ಚಾಗಿ ಕಂಡುಬರಲು ಕಾರಣ ನಮ್ಮ ಆಹಾರ ಪದ್ದತಿಯಾಗಿದೆ. ಬದುಕಿನ ಶೈಲಿಯನ್ನು ಬದಲಾಯಿಸುವುದೇ ಇದಕ್ಕೆ ಪರಿಹಾರವೆಂದು ಹೇಳಿದರು.
ಫ್ಲೈ ಹೈ ಚಾರಿಟೀಬಲ್ ಟ್ರಸ್ಟ್ ನ ಸದಸ್ಯೆ ಹಾಗೂ ಮಿಸ್ ಇಂಡಿಯಾ ಸಂಸ್ಥೆಯ ಪ್ರಾದೇಶಿಕ ಅಧ್ಯಕ್ಷೆ ಶ್ರೀಮತಿ ಮರ್ಸಿ ಡಿ’ಸೋಜಾ ಮಾತನಾಡಿ ಜನಸೇವೆಯಲ್ಲಿ ತನಗೆ ಸಾರ್ಥಕ್ಯವಿದೆ ಎಂದರು.
ಪ್ರಿವಿಂಕಲ್ ಲೇಡಿಸ್ ಬ್ಯೂಟಿ ಪಾರ್ಲರ್ನ ಮುಖ್ಯಸ್ಥೆ ಶ್ರೀಮತಿ ಪ್ರೀತಿ ಡಿ’ಸೋಜಾ ಕೇಶದಾನದ ಕೈಂಕರ್ಯವನ್ನು ನೆರವೇರಿಸಿದರು. ಒಟ್ಟಾಗಿ ೨೩ ಕಾಲೇಜಿನ ವಿದ್ಯಾರ್ಥಿನಿಯರು, ಹೆತ್ತವರು ಹಾಗೂ ಇತರ ಕೇಶದಾನಿಗಳು ಕೇಶದಾನ ಮಾಡಿ ನೆರೆದವರ ಮೆಚ್ಚುಗೆ ಪಡೆದರು.
ವಿದ್ಯಾರ್ಥಿನಿಯರ ವಿಶಾಲ ಮನಸ್ಥಿತಿ, ಸಹಾಯಪರ ನಿಲುವನ್ನುಎಲ್ಲರೂ ಶ್ಲಾಘಿಸಿದರು. ಕಾರ್ಯಕ್ರಮ ಕಾಲೇಜಿನ ಪ್ರಾಂಶುಪಾಲರಾದ ಸಿಸ್ಟರ್ ನೋರಿನ್ ಡಿ’ಸೋಜಾ, ಉಪ ಪ್ರಾಂಶುಪಾಲರಾದ ಸಿಸ್ಟರ್ ಜಾನೆಟ್ ಸಿಕ್ವೇರಾ. ಸಂಯೋಜಕರಾದ ಡಾ| ಟ್ರೆಸ್ಸಿ ಮಿನೇಜಸ್, ಶಿಕ್ಷಕ-ಶಿಕ್ಷಕೇತರರು, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಶ್ರೀಮತಿ ಪ್ರೀಮಾ ಕೊರೆಯ ಸ್ವಾಗತಿಸಿ, ಕು. ಪ್ರೀವಿ ಡಿ’ಸೋಜಾ ವಂದನಾರ್ಪಣೆಗೈದು, ಕು. ಸೆರೆನಾ ಸಲ್ಡಾನ್ಹ ನಿರ್ವಹಿಸಿದರು.
ಸೈಂಟ್ ಆಗ್ನೇಸ್ ಪದವಿ ಪೂರ್ವ ಕಾಲೇಜು : ಸ್ತನ ಕ್ಯಾನ್ಸರ್ ಬಗ್ಗೆ ಅರಿವಿನ ಜಾಗೃತಿ ಹಾಗೂ ಕೇಶದಾನ ಅಭಿಯಾನ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.