News Karnataka Kannada
Monday, May 06 2024
ಮಂಗಳೂರು

ಸುಳ್ಯ: ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ವಾರ್ಷಿಕ ಮಹಾಸಭೆ-ನೂತನ ಪದಾಧಿಕಾರಿಗಳ ಆಯ್ಕೆ

Mangaluru: Derebail Sankesh area CITU welcome committee formed
Photo Credit :

ಆಫ್ ಲಿಬರಲ್ ಎಜ್ಯುಕೇಶನ್ (ರಿ.), ಸುಳ್ಯ ಇದರ 2020- 2021ರ ಸಾಲಿನ ವಾರ್ಷಿಕ ಮಹಾಸಭೆಯು ದಿ. 4,03,2022 ರಂದು ಸಂಘದ ಪ್ರಧಾನ ಕಾರ್ಯಾಲಯ, ಕೆ.ಪಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಸುಳ್ಯ ಇಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಡಾ. ಕೆ. ವಿ. ಚಿದಾನಂದ ಇವರು ವಹಿಸಿದ್ದರು.

ಈ ಸಭೆಯಲ್ಲಿ 2020 2021ರ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕಪತ್ರಗಳನ್ನು ಮಂಡಿಸಿ ಸಭೆಯ ಅನುಮೋದನೆಯನ್ನು ಪಡೆಯಲಾಯಿತು. ನಂತರ 2021-2022ನೇ ಸಾಲಿನ ನೂತನ ಪಧಾದಿಕಾರಿಗಳ ಆಯ್ಕೆ ನಡೆಯಿತು, ನೂತನ ಸಮಿತಿಯ ಅಧ್ಯಕ್ಷರಾಗಿ ಡಾ. ಕೆ. ಬಿ. ಚಿದಾನಂದ, ಪ್ರಧಾನ ಕಾರ್ಯದರ್ಶಿಯಾಗಿ ಅಕ್ಷಯ್ ಕೆ. ಸಿ., ಕಾರ್ಯದರ್ಶಿಯಾಗಿ ಕೆ. ವಿ. ಹೇಮನಾಥ್ ಮತ್ತು ಆಡಳಿತ ಸಮಿತಿಯ ಸದಸ್ಯರಾಗಿ ಡಾ. ರೇಣುಕಾ ಪ್ರಸಾದ್ ಕೆ. ಪಿ., ಶ್ರೀಮತಿ, ಶೋಭಾ ಚಿದಾನಂದ: ಡಾ. ಜ್ಯೋತಿ ಆರ್. ಪ್ರಸಾದ್, ಡಾ. ಅಭಿಜ್ಞಾಕ. ಆರ್. ಡಾ. ಐಶ್ವರ್ಯ ಕೆ. ಸಿ. ಡಾ ಗೌತಮ್ ಗೌಡ ಎ. ಜಿ. ಆಯ್ಕೆಯಾದರು. ಈ ಸಮಿತಿಯು ಮುಂದಿನ ವಾರ್ಷಿಕ ಮಹಾಸಭೆಯ ತನಕ ಕಾರ್ಯನಿರ್ವಹಿಸಲಿವೆ.

ಸಭೆಯಲ್ಲಿ ಡಾ. ಕೆ. ಎ. ಚಿದಾನಂದ ಇವರು ಸ್ವಾಗತಿಸಿ, ಶ್ರೀ.ಕೆ. ವಿ. ಹೇಮನಾಥ್ ವಂದಿಸಿದರು. ಸಭೆಯು ರಾಷ್ಟ್ರಗೀತೆಯೊಂದಿಗೆ ಸಮಾಪನಗೊಂಡಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು