ಮಂಗಳೂರು :ಬೈಂದೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸತ್ತ ಹಸುಗಳನ್ನು ಟೋಯಿಂಗ್ ವಾಹನಕ್ಕೆ ಕಟ್ಟಿ ಎಳೆದೊಯ್ದ ಘಟನೆ ನಡೆದಿದ್ದು ಹಿಂದೂ ಸಂಘಟನೆಗಳಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ.
ರಾಷ್ಟ್ರೀಯ ಹೆದ್ದಾರಿ 66 ಸತ್ತು ಬಿದ್ದಿದ್ದ 2ಹಸುಗಳನ್ನು ವಾಹನಕ್ಕೆ ಹಾಕಿ ಸಾಗಿಸುವ ಬದಲು ಹಗ್ಗ ಕಟ್ಟಿ ಎಳೆದೊಯ್ದಿದ್ದಾರೆ ಹೆದ್ದಾರಿ ಕನ್ಸಕ್ಷನ್ ಕೆಲಸಮಾಡುವ ಐಆರ್ ಬಿ ಕಂಪೆನಿಯವರು ಈ ರೀತಿ ಹಸುಗಳನ್ನು ಹೆದ್ದಾರಿಯಲ್ಲಿ ಎಳೆದೊಯ್ದು ವೀಡಿಯೋ ವೈರಲ್ ಆಗಿದ್ದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾನಗರ ಪಾಲಿಕೆ ಅಥವಾ ಆಯಾ ಭಾಗದ ಸ್ಥಳೀಯಾಡಳಿತಗಳು ಇದನ್ನು ಮಾಡಬೇಕಿತ್ತು ಆದರೆ ಅವರು ಮಾಡಿಲ್ಲ ಎಂದು ಹೆದ್ದಾರಿ ಗಸ್ತು ನಿರತ ಐಆರ್ ಬಿ ಕಂಪೆನಿಯವರು ಹಸುಗಳನ್ನು ಎತ್ತುವ ಕೆಲಸ ಮಾಡಿದ್ದಾರೆ ಎನ್ನಲಾಗುತ್ತಿದೆ.
ಹಸುಗಳನ್ನು ವಾಹನಕ್ಕೆ ಕಟ್ಟಿ ಎಳೆದೊಯ್ದ ಘಟನೆಯ ವಿಡಿಯೋ ವೈರಲ್ ಆಗಿದ್ದು ಘಟನೆ ಬಗ್ಗೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.