ಮಂಗಳೂರು: ಮಂಗಳೂರು ರಥಬೀದಿಯ ವೀರ ವೆಂಕಟೇಶ ಅಪಾರ್ಟ್ಮೆಂಟ್ ನಲ್ಲಿ ಕ್ಷುಲ್ಲಕ ಕಾರಣಕ್ಕೆ ವಾಗ್ವಾದ . ಎದೆಯ ಭಾಗಕ್ಕೆ ಚೂರಿಯಿಂದ ಇರಿಯಲ್ಪಟ್ಟ ವಿನಾಯಕ ಕಾಮತ್(44) ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದ್ದಿದ್ದಾರೆ.
ಸಿಮೆಂಟ್ ಹಾಕಿದ ರಸ್ತೆಯಲ್ಲಿ ಕಾರು ಚಲಾಯಿಸಿರುವುದು ಹಾಗೂ ಪಾರ್ಕಿಂಗ್ ಜಾಗದಲ್ಲಿ ಪಟಾಕಿ ಸಿಡಿಸಿರುವುದೂ ಈ ಕೃತ್ಯಕ್ಕೆ ಕಾರಣವಾಗಿದೆ. ವಿಚಾರದಲ್ಲಿ ಅದೇ ಅಪಾರ್ಟ್ಮೆಂಟ್ ನ ನಿವಾಸಿಗಳಾದ ಕೃಷ್ಣಾನಂದ ಕಿಣಿ ಮತ್ತು ಆತನ ಪುತ್ರ ಅವಿನಾಶ್ ಕಿಣಿ ಕೃತ್ಯವೆಸಗಿದ್ದಾರೆ.ಪ್ರಕರಣವು ನಿನ್ನೆ ರಾತ್ರಿ ದೀಪಾವಳಿ ಆಚರಣೆ ವೇಳೆ ಫ್ಲಾಟ್ ಕೆಳಗೆ ನಡೆದಿದೆ. ಜಗಳ ಮಾತಿಗೆ ಮಾತು ಬೆಳೆದು ಈ ಕೊಲೆಯಾಗಿದೆ.
ದೃಶ್ಯವು ಫ್ಲಾಟ್ ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸದ್ಯ ಆರೋಪಿಗಳಾದ ಕೃಷ್ಣಾನಂದ ಕಿಣಿ ಹಾಗೂ ಅವರ ಪುತ್ರ ಅವಿನಾಶ್ ಕಿಣಿಯನ್ನು ಮಂಗಳೂರಿನ ಬಂದರು ಪೋಲಿಸರು ಬಂಧಿಸಿದ್ದಾರೆ.