ಬೆಳ್ತಂಗಡಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟ್ ವತಿಯಿಂದ ಕೊಡಮಾಡಿದ ಆರು ಸಂಚಾರಿ ಮಾರಾಟ ವಾಹನಗಳನ್ನು (ಎರಡು ಟಾಟಾ 407, ಒಂದು ಟಾಟಾ ಯೋಧ, ಎರಡು ಬೊಲೆರೋ ಪಿಕ್ಅಪ್ ಮತ್ತು ಒಂದು ಇಕೊ ಕಾರ್ಗೊ) ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಕಾರ್ಯನಿರ್ವಹಣಾಧಿಕಾರಿ ಡಾ. ಎಲ್. ಎಚ್. ಮಂಜುನಾಥ್ ಅವರು “ಸಿರಿ” ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ದನ್ರಿಗೆ ಹಸ್ತಾಂತರಿಸಿದರು.
ಮಹೇಂದ್ರ ಕಂಪೆನಿಯ ಮಹಾಪ್ರಬಂಧಕ ಫಾರ್ಚುನೇಟ್ ಸೆರಾವೊ, ಡಿ.ಜಿ.ಎಂ. ಉದಯ್, ಟಾಟಾ ಮೋಟಾರ್ಸ್ ಹಿರಿಯ ಪ್ರಬಂಧಕ ಸುಜಿತ್ ಪದ್ಮನಾಭ್, ಭಾರತ್ ಆಟೋ ಕಾರ್ಸ್ನ ಪ್ರಬಂಧಕ ಪ್ರದೀಪ್, ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ನಿರ್ವಹಣಾಧಿಕಾರಿ ಅನಿಲ್ ಉಪಸ್ಥಿರಿದ್ದರು.