ಬೆಳ್ತಂಗಡಿ : ದತ್ತ ಜಯಂತಿ ಅಂಗವಾಗಿ ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದಲ್ಲಿ ದತ್ತಾತ್ರೇಯ ವಿಶೇಷ ಪೂಜೆ ಕ್ಷೇತ್ರದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಯವರ ಉಪಸ್ಥಿತಿ ಯಲ್ಲಿ ವೇ. ಮೂ. ಲಕ್ಷ್ಮಿಪತಿ ಗೋಪಾಲಚಾರ್ಯರ ನೇತೃತ್ವದಲ್ಲಿ ನಡೆಯಿತು.
ಕಾರ್ಯಕ್ರಮದ ಮೊದಲು ಯಜ್ಞ, ದತ್ತಾತ್ರೇಯ ಮತ್ತು ಶ್ರೀ ರಾಮ ದೇವರಿಗೆ ವಿಶೇಷ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್,ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ ರಾವ್, ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ವಿಜಯ ರಮೇಶ್, ಶ್ರೀ ರಾಮ ಕ್ಷೇತ್ರ ಸಮಿತಿ ಜಿಲ್ಲಾ ಸಂಚಾಲಕ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ,ತಾಲೂಕು ಪಂಚಾಯತ್ ಮಾಜಿ ಸದಸ್ಯ ಸುಧೀರ್ ಆರ್. ಸುವರ್ಣ, ಪ್ರಶಾಂತ್ ಪ್ರತಿಮಾ ನಿಲಯ, ಧರ್ಮಸ್ಥಳ ಶ್ರೀ ರಾಮ ಕ್ಷೆತ್ರ ಸಮಿತಿ ಅಧ್ಯಕ್ಷ ಪುರುಷೋಷತ್ತಮ ಧರ್ಮಸ್ಥಳ,ಕಲ್ಮಂಜ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ, ಬೆಳಾಲು ಸಮಿತಿ ಅಧ್ಯಕ್ಷ ಜಾರಪ್ಪ ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಸುವರ್ಣ ಕನ್ಯಾಡಿ, ಸುರೇಶ್ ಕೆ. ಉಜಿರೆ, ರಾಘವ ಕಲ್ಮಂಜ , ದೇವಿಪ್ರಸಾದ್ ಬರೆಮೇಲು,ನಿವೃತ್ತ ಎಸ್. ಡಿ. ಇ. ಅಣ್ಣಿ ಪೂಜಾರಿ, ನಿವೃತ್ತ ಶಿಕ್ಷಕ ಕೃಷ್ಣಪ್ಪ ಪೂಜಾರಿ ಧರ್ಮಸ್ಥಳ, ಸೋಮನಾಥನ್ ಧರ್ಮಸ್ಥಳ, ಧರ್ಮಣ್ಣ ಗೌಡ, ಟ್ರಸ್ಟಿ ತುಕಾರಾಮ ಸಾಲಿಯಾನ್, ರಥಬೀದಿ ವ್ಯಾಪಾರಸ್ತರು, ಅರ್ಚಕರು, ಭಕ್ತರು ಹಾಜರಿದ್ದರು.