News Karnataka Kannada
Tuesday, April 30 2024
ಮಂಗಳೂರು

ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ವಾರ್ಷಿಕ ವಿಷು ಜಾತ್ರಾ ಮಹೋತ್ಸವ

Dharmasthala
Photo Credit :

ಬೆಳ್ತಂಗಡಿ; ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಎ 14 ರಂದು ಪ್ರಾರಂಭಗೊಂಡ ವಾರ್ಷಿಕ ವಿಷು ಜಾತ್ರಾ ಮಹೋತ್ಸವವು ಧರ್ಮಾಧಿಕಾರಿ ಡಾ! ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಹಾಗು ವೈದಿಕ ಕಾರ್ಯಕ್ರಮಗಳೊಂದಿಗೆ ನಡೆದು ಎ .21 ರಂದು ರಾತ್ರಿ ಬ್ರಹ್ಮ ರಥೋತ್ಸವ ದೊಂದಿಗೆ ಸಂಭ್ರಮದಿಂದ ಸಂಪನ್ನಗೊಂಡಿತು.

ಎ .21 ರಂದು ರಾತ್ರಿ ಶ್ರೀ ಮಂಜುನಾಥ ಸ್ವಾಮಿಯ ಒಳಾಂಗಣದಲ್ಲಿ ನಾಲ್ಕು ಸುತ್ತು ಶ್ರೀ ದೇವರ ಬಲಿ ಉತ್ಸವ ನಡೆದು ,ರಥ ಶುದ್ಧಿ ಬಳಿಕ ವಿವಿಧ ವಾದ್ಯ ಮೇಳಗಳು,ಕ್ಷೇತ್ರದ ಆನೆಗಳು ,ಬಸವ,ಸಕಲ ಬಿರುದಾವಳಿಗಳು,ತಟ್ಟೀರಾಯ,ಬ್ಯಾಂಡ್

ವಾಲಗ,ಸ್ಯಾಕ್ಸೋಫೋನ್ ವಾದನ,ಶಂಖ ಜಾಗಟೆವಾದನ ಗಳೊಂದಿಗೆ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಶ್ರೀ ದೇವರ ರಥಾರೋಹಣ ವೈಭವದಿಂದ ನಡೆಯಿತು. ಗೋವಿಂದನಾಮಸ್ಮರಣೆಯೊಂದಿಗೆ ಭಕ್ತರು ರಥವನ್ನು ಅಣ್ಣಪ್ಪ ಬೆಟ್ಟದವೆರೆಗೆ ಒಯ್ದು ,ಅಲ್ಲಿಂದ ಮರಳಿ ಸ್ವಸ್ಥಾನಕ್ಕೆ ತಂದರು. ಶ್ರೀ ದೇವರು ಒಳಾಂಗಣ ಕಟ್ಟೆಯಲ್ಲಿ ವಸಂತ ಪೂಜೆ ,ಅಷ್ಟಾವಧಾನ ಸೇವೆ ಬಳಿಕ ಗರ್ಭಗುಡಿ ಪ್ರವೇಶಿಸಿದರು .

ರಾತ್ರಿ ಭೂತಬಲಿ ನಡೆದು ,ಎ 22. ರಂದು ಬೆಳಿಗ್ಗೆ ಕವಾಟೋದ್ಘಾಟನೆ ನಡೆಯಿತು. ರಾತ್ರಿ ನೇತ್ರಾವತಿ ನದಿಯಲ್ಲಿ ಶ್ರೀ ದೇವರ ಅವಭ್ರತಸ್ನಾನ ನಡೆದು ಮರಳಿ ಬಂದ ಬಳಿಕ ಧ್ವಜಾವರೋಹಣ ನಡೆಯುವುದರೊಂದಿಗೆ ವಾರ್ಷಿಕ ವಿಷು ಜಾತ್ರಾ ಮಹೋತ್ಸವ ವಿದ್ಯುಕ್ತವಾಗಿ ಸಂಭ್ರಮದಿಂದ ಸಂಪನ್ನಗೊಂಡಿತು. ಮಾಣಿಲ ಶ್ರೀಧಾಮ ಶ್ರೀ ಮೋಹನದಾಸ ಸ್ವಾಮೀಜಿ, ಸುರೇಂದ್ರ ಕುಮಾರ್ ,ಹರ್ಶೆನ್ದ್ರ ಕುಮಾರ್ ,ಹೇಮಾವತಿ ಹೆಗ್ಗಡೆ,ರಾಜೇಂದ್ರ ಕುಮಾರ್ ಮತ್ತು ಹೆಗ್ಗಡೆ ಕುಟುಂಬಸ್ಥರು,ಕ್ಷೇತ್ರದ ಸಿಬ್ಬಂದಿ ವರ್ಗ ಹಾಗು ಊರ ಪರಊರ ಭಕ್ತಾದಿಗಳು ಸಂಭ್ರಮದಲ್ಲಿ ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು