Categories: ಮಂಗಳೂರು

ಶ್ರೀರಾಮನ ನಡೆ ಜಗತ್ತಿಗೆ ಮಾರ್ಗದರ್ಶಿ : ಎಡನೀರು ಶ್ರ್ರಿಗಳು

ಬೆಳ್ತಂಗಡಿ : ಶ್ರೀರಾಮ ಜಗತ್ತಿಗೆ ಮಾದರಿಯಾದ ಅವತಾರಿ ಪುರುಷ. ಆತನ ನಡೆ ನಮಗೆಲ್ಲಾ ಮಾದರಿ ಹಾಗೂ ಮಾರ್ಗದರ್ಶಿಯಾಗಿದೆ. .ರಾಮ ನಾಮ ಅತ್ಯಂತ ಪವಿತ್ರ ನಾಮ . ರಾಮ ನಾಮದಿಂದ ಹನುಮಂತ ಬಲವಂತನಾದ .ಆದುದರಿಂದ ಹನುಮಂತ ಚಿರಂಜೀವಿ . ಹನುಮ ಜಯಂತಿಯಂದು ಶ್ರೀ ರಾಮ ತಾರಕ ಮಂತ್ರ ಹವನ ಮಾಡಿರುವುದು ಅಭಿನಂದನೀಯ. ಎಲ್ಲರಿಗೂ ಒಳಿತಾಗಲಿ . ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ನುಡಿದರು.

ಅವರು ಎ 16 ರಂದು ಶಿಶಿಲ ಗ್ರಾಮದ ಶಿವಕೀರ್ತಿ ನಿಲಯದ ಜಯರಾಮ ನೆಲ್ಲಿತ್ತಾಯರ ಮನೆಯಲ್ಲಿ ನಡೆದ ಹನುಮ ಜಯಂತಿ ಮತ್ತು ಶ್ರೀ ರಾಮ ತಾರಕ ಮಂತ್ರ ಜಪ ಹವನದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು. ಶಿಶಿಲದ ಶಿವಕೀರ್ತಿ ನಿಲಯದಲ್ಲಿ ಹನುಮಜಯಂತಿ ಪ್ರಯುಕ್ತ ,ಶ್ರೀರಾಮ ತಾರಕ ಜಪ ಹೊಮ, ರಾಮಾಯಣ ಗ್ರಂಥ ಪೂಜೆ, ಭಜನೆ ಮುಂತಾದ ಧಾರ್ಮಿಕ ಕಾರ್ಯಕ್ರಮ ಊರ ಪರವೂರ ಭಕ್ತರ ಸಮ್ಮುಖದಲ್ಲಿ ವಿಧ್ಯುಕ್ತವಾಗಿ ವೈಭವದಿಂದ ನಡೆಯಿತು. .

ಶ್ರೀ ರಾಮಕೃಷ್ಣ ಕಾಟುಕುಕ್ಕೆ ಅವರಿಂದ” ಶ್ರೀರಾಮ ” ಗೀತ ಗಾಯನ, ಶ್ರೀ ರಾಘವೇಂದ್ರ ಭಟ್ ಕಿಗ್ಗ ಮತ್ತು ಶ್ರೀಮತಿ ಲೀಲಾ ಶ್ರೀಧರ ರಾವ್ ಅವರಿಂದ ಭಕ್ತಿಗಾನ ನಡೆಯಿತು . ಭಕ್ತಾಧಿಗಳು ಸಾಮೂಹಿಕ ರಾಮನಾಮ ಸ್ಮರಣೆ , ಸಾಮೂಹಿಕ ಭಜನೆಯಲ್ಲಿ ಪಾಲ್ಗೊಂಡರು.

ಇದೆ ಸಂದರ್ಭದಲ್ಲಿ ಜಯರಾಮ ನೆಲ್ಲಿತ್ತಾಯ ದಂಪತಿಗಳು ಎಡನೀರು ಶ್ರೀಗಳ ಪಾದಪೂಜಾಕಾರ್ಯಕ್ರಮವನ್ನು ನೆರವೇರಿಸಿದರು. ರಾಮತಾರಕ ಮಂತ್ರ ಜಪ ಹೊಮವನ್ನು ವೈದಿಕರಾದ ಶ್ರೀವತ್ಸ್ಯ ಕೆದಿಲಾಯ ಮತ್ತು ತಂಡದವರು ನೆರೆವೆರಿಸಿದ್ದರು. ಶ್ರೀಮತಿ ಪ್ರೀತಿಕಾ ಯಶಸ್ ಸ್ವಾಗತಿಸಿ, ವಂದಿಸಿದರು.

Gayathri SG

Recent Posts

ವರುಣನ ಆರ್ಭಟಕ್ಕೆ ಬೆಳೆ ನಷ್ಟ : ಬಿರುಗಾಳಿ ಮಳೆಗೆ ನೆಲಕಚ್ಚಿದ 8 ಎಕರೆ ಬಾಳೆ ಬೆಳೆ

ವರುಣ ಕ್ಷೇತ್ರದಲ್ಲಿ ವರುಣನ ಆರ್ಭಟಕ್ಕೆ ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ಸುಮಾರು ಎಂಟು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆಗೊನೆ…

3 mins ago

ಯೇನೆಪೋಯ ವಿಶ್ವ ವಿದ್ಯಾನಿಲಯದಲ್ಲಿ ಕೌಶಲ್ಯ ಮೌಲ್ಯಮಾಪನ ಕಾರ್ಯಾಗಾರ

ನರ್ಸಿಂಗ್ ಎಜುಕೇಶನ್ ವಿಭಾಗ, ಯೇನೆಪೋಯ ನರ್ಸಿಂಗ್ ಕಾಲೇಜು, ಹಾಗೂ ಯೇನೆಪೋಯ ವಿಶ್ವ ವಿದ್ಯಾನಿಲಯ, ಮಂಗಳೂರು. ಇದರ ಆಶ್ರಯದಲ್ಲಿ ದಿನಾಂಕ ೦೪.೦೫.೨೦೨೪…

6 mins ago

ಬೀದರ್ ಅಭಿವೃದ್ಧಿಗೆ ಕಾಂಗ್ರೆಸ್ ಗೆಲ್ಲಿಸಿ : ಸಾಗರ್ ಖಂಡ್ರೆ ಮನವಿ

'ಬೀದರ್ ಲೋಕಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ. ಅತ್ಯಂತ ಕಿರಿಯ ವಯಸ್ಸಿನ ಅಭ್ಯರ್ಥಿಯನ್ನು ಸಂಸತ್ತಿಗೆ ಗೆಲ್ಲಿಸಿ…

13 mins ago

ಪಕ್ಷಿಗಳ ದಾಹ ತಣಿಸುವ ಪರಿಸರ ಪ್ರೇಮಿ ರಿಯಾಜ್‌ ಪಾಶಾ

ಹೆಚ್ಚುತ್ತಿರುವ ಬಿಸಿಲಿನ ತಾಪದಿಂದ ತಾಲ್ಲೂಕಿನ ಗಡಿ ಭಾಗದ ಜನ ಜಾನುವಾರುಗಳ ಜತೆ ಪ್ರಾಣಿ ಪಕ್ಷಿಗಳು ಕುಡಿಯುವ ನೀರಿಗಾಗಿ ಪರದಾಡಬೇಕಿದೆ. ತಾಲ್ಲೂಕಿನ…

32 mins ago

ಚಾಮುಂಡಿಬೆಟ್ಟದ ಪಾದದಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರಿನ ತೊಟ್ಟಿ ಅಳವಡಿಕೆ

ನಗರದ ಚಾಮುಂಡಿ ಬೆಟ್ಟದ ಪಾದದಲ್ಲಿ ಕೆಎಂಪಿ ಕೆ ಚಾರಿಟೇಬಲ್ ಟ್ರಸ್ಟ್ ಹಾಗೂ ಸೈನಿಕ ಅಕಾಡೆಮಿ  ವತಿಯಿಂದ ಶನಿವಾರ ಪ್ರಾಣಿ ಪಕ್ಷಿಗಳು,…

37 mins ago

ಪ್ರಜ್ವಲ್ ವಿರುದ್ಧ ನಾವು ಕೊಟ್ಟ ಮೊದಲ ದೂರು ದಾಖಲಾಗಿಲ್ಲ: ವಕೀಲ ಆಕ್ರೋಶ

ಹಾಸನ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ರಾಸಲೀಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ…

56 mins ago