News Karnataka Kannada
Friday, May 10 2024
ಮಂಗಳೂರು

ವಿವಾದಗಳು ಜನಜಾಗೃತಿಯ ಭಾಗವೇ ಹೊರತು ಸರ್ಕಾರದ ಪಾತ್ರವಿಲ್ಲ: ಕೋಟ ಶ್ರೀನಿವಾಸ ಪೂಜಾರಿ

Kota Shrinivasa Poojari
Photo Credit :

ಮಂಗಳೂರು : “ರಾಜ್ಯದಲ್ಲಿ ಹಿಂದುತ್ವದ ಹೆಸರಿನಲ್ಲಿ ಕೆಲವೊಂದು ಜಾಗೃತಿಗಳು ನಡೆಯುತ್ತಿದೆ. ಲವ್ ಜಿಹಾದ್ ಮುಂತಾದ ಅನಾಹುತಗಳಿಗೆ ಈಗ ಪ್ರತಿರೋಧ ವ್ಯಕ್ತವಾಗುತ್ತಿದೆ. ವಿವಾದಗಳು ಜನಜಾಗೃತಿಯ ಭಾಗವೇ ಹೊರತು ಸರ್ಕಾರ ಅದರಲ್ಲಿ ಭಾಗಿಯಿಲ್ಲ” ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಅವರು ಮಾತನಾಡಿದರು. ಹಿಂದೂಯೇತರರಿಗೆ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಅಂಗಡಿ ವ್ಯಾಪಾರಕ್ಕೆ ‌ನೀಡಿದ್ರೆ ಇ.ಒ ಸಸ್ಪೆಂಡ್ ಆದೇಶ ವಿಚಾರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ನಿಯಮಗಳನ್ನು ಹಿಂದಿನ ಸರ್ಕಾರ ಜಾರಿಗೆ ತಂದಿದೆ.

ಯಾವುದೇ ತಾರತಮ್ಯ ಇಲ್ಲದೆ ಕಾನೂನು ಪಾಲಿಸೋದು ಅನಿವಾರ್ಯ. ಮುಖ್ಯಮಂತ್ರಿಗಳು ಈಗಾಗಲೇ ಇದನ್ನು ‌ಸ್ಪಷ್ಟಪಡಿಸಿದ್ದಾರೆ. ಜಾತಿ‌ ಧರ್ಮ ವರ್ಗ‌ ನಡುವೆ ತಾರತಮ್ಯ ಇಲ್ಲ. ತಾರತಮ್ಯ ಇಲ್ಲದ ಪರಿಸ್ಥಿತಿ ನಿರ್ಮಾಣ ಸರ್ಕಾರದ ಜವಾಬ್ದಾರಿ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು