ಬೆಳ್ತಂಗಡಿ: ರಾಜ್ಯದ ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಮಾಡಿದ ಭಾಷಣದ ಮೇಲಿನ ಚಚೆ೯ಯಲ್ಲಿ ಭಾಗವಹಿಸದೆ ಕಲಾಪವನ್ನು ನಡೆಸಲು ಬಿಡದೆ ಕಾಂಗ್ರೆಸ್ ಅತ್ಯಂತ ಬೇಜವಾಬ್ದಾರಿಯಿಂದ ವತಿ೯ಸಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಆರೋಪಿಸಿದ್ದಾರೆ.
ರಾಜ್ಯದ ಅಭಿವೃದ್ಧಿ ಮತ್ತು ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕಾದ ವೇದಿಕೆಯನ್ನು ತನ್ನ ಪ್ರತಿಷ್ಠೆ ಮತ್ತು ಹಠಮಾರಿತನದ ಕಾರಣಕ್ಕಾಗಿ ಕಲಾಪವನ್ನು ಬಲಿಯಾಗಿಸಿದ್ದು ದುರದೃಷ್ಟಕರ. ಕಾಂಗ್ರೆಸ್ಸಿನ ವತ೯ನೆ ಅದು ಆಡಳಿತ ಮಾಡಲು ಮಾತ್ರವಲ್ಲ ವಿರೋಧ ಪಕ್ಷವಾಗಿಯೂ ಜವಾಬ್ದಾರಿ ನಿವ೯ಹಿಸಲು ನಾಲಾಯಕ್ಕು ಎಂದು ತೋರಿಸಿ ಕೊಟ್ಟಿದೆ.
ಹಿಜಾಬ್ ಪ್ರಕರಣದಲ್ಲಿ ಕಾಂಗ್ರೆಸ್ಗೆ ಸ್ಪಷ್ಟ ನಿಲುವನ್ನು ರಾಜ್ಯದ ಜನತೆಗೆ ತಿಳಿಸಲು ಸಾಧ್ಯವಾಗದೆ, ತನ್ನ ವೈಫಲ್ಯ ಮರೆಮಾಚಲು ರಾಷ್ಟ್ರಧ್ವಜದ ಪ್ರಕರಣ ಸೃಷ್ಟಿಸಿ ಆಧಾರಿತ ಆರೋಪ ಮಾಡಿ ಸದನದ ಕಲಾಪಕ್ಕೆ ಅಡ್ಡಿ ಪಡಿಸಿ ಸಂವಿಧಾನದ ಮತ್ತು ಜನರ ಆಶೋತ್ತರಗಳಿಗೆ ತಿಲಾಂಜಲಿ ನೀಡಿದೆ. ಶತಮಾನದ ರಾಜಕೀಯದ ಇತಿಹಾಸ ಇರುವ ಕಾಂಗ್ರೆಸ್ ಸದನದಲ್ಲಿ ತೋರಿಸಿದ ನಡವಳಿಕೆ ಅದರ ಹಿರಿತನಕ್ಕೆ ಶೋಭೆ ತರುವುದಿಲ್ಲ.
ದೇಶದ ಹಿತಾಸಕ್ತಿಗೆ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದರೆ ಅಪಾಯಕಾರಿ. ಅಧಿಕಾರದಲ್ಲಿ ಇಲ್ಲದಿದ್ದರೆ ಮತ್ತಷ್ಟು ಅಪಾಯಕಾರಿ ಎಂಬುದನ್ನು ತನ್ನ ನಡವಳಿಕೆಯಿಂದ ಮತ್ತೊಮ್ಮೆ ಸಾಬೀತು ಪಡಿಸಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಜನತೆ ಈ ಬೇಜವಾಬ್ದಾರಿ ವತ೯ನೆಗೆ ಕಾಂಗ್ರೇಸ್ಗೆ ತಕ್ಕ ಪಾಠ ಕಲಿಸಲಿದ್ದಾರೆ.
ಇಷ್ಟೇ ಅಲ್ಲದೆ ರಾಜ್ಯ ವಿಧಾನ ಮಂಡಲದ ಇತಿಹಾಸದಲ್ಲಿ ರಾಜ್ಯಪಾಲರು ಮಾಡಿದ ಭಾಷಣದ ವಿಷಯದ ಮೇಲೆ ಪೂರ್ಣ ಪ್ರಮಾಣದ ಚಚೆ೯ ನಡೆಯದೆ ವಂದನಾ ನಿಣ೯ಯ ಕೈಗೊಂಡಿರುವುದು ಇದೇ ಮೊದಲ ಬಾರಿಯಾಗಿದೆ ಎಂದು ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.