News Karnataka Kannada
Friday, May 10 2024
ಮಂಗಳೂರು

ರಾಜ್ಯದಲ್ಲಿ ಯಾವುದೇ ಸಮಯದಲ್ಲಿ ಚುನಾವಣೆ ನಡೆದರೂ ನಾವು ಎದುರಿಸಲು ಸಿದ್ದ: ಸಚಿವ ಸೊಮಣ್ಣ

V Somanna
Photo Credit :

ಬಂಟ್ವಾಳ: ರಾಜ್ಯದಲ್ಲಿ ಯಾವುದೇ ಸಮಯದಲ್ಲಿ ಚುನಾವಣೆ ನಡೆದರೂ ನಾವು ಎದುರಿಸಲು ಸಿದ್ದರಿದ್ದು, ಮೋದಿಯವರ ಹಾಗೂ ಬೊಮ್ಮಾಯಿ ಅವರ ಜನಪರ ಯೋಜನೆಯನ್ನು ಜನರ ಮುಂದಿಟ್ಟುಕೊಂಡು ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ನಮ್ಮ ಮೊದಲ ಆದ್ಯತೆಯಾಗಿದ್ದು, ಅ‌ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ ಎಂದು ವಸತಿ ಸಚಿವ ಸೊಮಣ್ಣ ಅವರು ಹೇಳಿದರು .

ಖಾಸಗಿ ಕಾರ್ಯಕ್ರಮಕ್ಕೆಂದು ಬಂಟ್ವಾಳಕ್ಕರ ಆಗಮಿಸಿದ್ದ ಅವರು ಬಂಟ್ವಾಳ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದರು.

ಪಂಚರಾಜ್ಯಗಳಲ್ಲಿ ಜನ ಯಾವ ತೀರ್ಮಾನ ಮಾಡಿ ಮತ ನೀಡಿ ಬಿಜೆಪಿ ಯನ್ನು ಗೆಲ್ಲಿಸಿದ್ದಾರಾ ಅದೇ ಮಾದರಿಯ ಲ್ಲಿ ದೇಶಕ್ಕೋಸ್ಕರ ನರೇಂದ್ರ ಮೋದಿಯವರ ಚಿಂತನೆಯ ನ್ನು ಪರಿಚಯಿಸುವುದೇ ನಮ್ಮ ಕೆಲಸ ಎಂದು ಅವರು ಹೇಳಿದರು.

ಗ್ರಾಮೀಣ ಭಾಗದಲ್ಲಿ ಹಿಂದಿನ ಸರಕಾರ ಮಾಡಿದ ಗೊಂದಲ ಗೂಡಿನಿಂದ 18 ಲಕ್ಷ ಮನೆಗಳು 6ಲಕ್ಷದ 60 ಸಾವಿರ ಸೈಟುಗಳು ಕೇಂದ್ರ ಸರಕಾರಕ್ಕೆ ಮಾಹಿತಿ ಕೊಡದೆ ತಿರಸ್ಕೃತಗೊಂಡಿದೆ.

ಬಳಿಕ ಪ್ರಧಾನ ಮಂತ್ರಿಗಳ ಸೂಚನೆಯಂತೆ ಮುಖ್ಯಮಂತ್ರಿ ಗಳು 5 ಲಕ್ಷ ಮನೆಗಳು 6612 ಕೋಟಿ ರೂ ವೆಚ್ಚದಲ್ಲಿ 4. ಲಕ್ಷ ಮನೆ ಗ್ರಾಮೀಣ ಭಾಗಕ್ಕೆ ಹಾಗೂ 1 ಲಕ್ಷ ನಗರ ಪ್ರದೇಶಕ್ಕೆ ಮನೆ ನೀಡಲಾಗುತ್ತಿದೆ. 2500 ಮನೆಗಳಿಗೆ ಕಾರ್ಯಾದೇಶ ನೀಡುವ ಕಾರ್ಯಕ್ಕೆ  ಅಧಿವೇಶನ ಮುಗಿದ ಬಳಿಕ ಎಪ್ರಿಲ್ ನಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ಚಾಲನೆ ನೀಡುವುದಾಗಿ ಅವರು ತಿಳಿಸಿದರು.

ಕೆಲ ಸಮಯಗಳಿ‌ಂದ ಕಾಡಿರುವ ಎಲ್ಲಾ ಗೊಂದಲಗಳಿಗೆ ಹಿಂದಿನ ಕಾಂಗ್ರೇಸ್ ಸರಕಾರವೇ ಕಾರಣವಾಗಿದ್ದು, ಪ್ರಸ್ತುತ ದಿನಗಳಲ್ಲಿ ಏನೋ ಸಮ್ಮನೆ ಸುಮ್ಮನೆ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.

ದ.ಕ.ಜಿಲ್ಲೆ ಸಹಿತ ಕಾರವಾರ, ಉಡುಪಿ ಬೈದೂಂರು ಸೇರಿಸಿಕೊಂಡು ಎಲ್ಲರಿಗೂ ಮನೆ ನೀಡುತ್ತೇವೆ. ಕರಾವಳಿ ಭಾಗದ ಯಾವುದೇ ಶಾಸಕರ ಬಗ್ಗೆ ಏನೋ ಸಣ್ಣ ಚಕಾರವೆತ್ತಲು ಆಗುವುದಿಲ್ಲ, ಎಲ್ಲಾ ಶಾಸಕರು ಪಾರದರ್ಶಕವಾಗಿ ಆಡಳಿತ ಮಾಡುತ್ತಿದ್ದಾರೆ ಎಂದವರು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ, ಪುರಸಭಾ ಸದಸ್ಯ ಎ.ಗೋವಿಂದ ಪ್ರಭು, ಉದ್ಯಮಿ ಉದಯ ಕುಮಾರ್ ರಾವ್, ಉಧ್ಯಮಿ ವಿವೇಕ್ ಶೆಟ್ಟಿ ನಗ್ರಿಗುತ್ತು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು