ಬೆಳ್ತಂಗಡಿ: ಮುಂಡಾಜೆ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು.
ಸಂವಿಧಾನದ ಬಗ್ಗೆ ಉಪನ್ಯಾಸ ನೀಡಿದ ರಾಜ್ಯಶಾಸ್ತ್ರ ಉಪನ್ಯಾಸಕ ಸುಭಾಷ್ ಚಂದ್ರ ಜೈನ್ ಮಾತನಾಡಿ “ಸಂವಿಧಾನವು ರಾಷ್ಟ್ರದ ಪವಿತ್ರ ಗ್ರಂಥವಾಗಿದೆ.
ಸಂವಿಧಾನದ ಆಶಯಗಳಿಗೆ ಸರಿಯಾಗಿ ಸರಕಾರವು ಕಾರ್ಯನಿರ್ವಹಿಸುವಂತೆ ಜಾಗೃತ ಮತದಾರರು ನೋಡಿಕೊಳ್ಳುವುದೇ ಸಂವಿಧಾನ ಶಿಲ್ಪಿ ಡಾ.ಬಿ. ಆರ್. ಅಂಬೇಡ್ಕರ್ ಅವರಿಗೆ ನಾವು ನೀಡುವ ಗೌರವವಾಗಿದೆ ” ಎಂದು ಹೇಳಿದರು.
ಕನ್ನಡ ಉಪನ್ಯಾಸಕಿ ವಸಂತಿ ಸ್ವಾಗತಿಸಿದರು. ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಅಧಿಕಾರಿ ನಮಿತಾ ಕೆ ಆರ್. ವಂದಿಸಿದರು.