News Karnataka Kannada
Tuesday, April 30 2024
ಮಂಗಳೂರು

ಮೀನುಗಾರಿಕೆ ಇಲಾಖೆ ವತಿಯಿಂದ ಒಳನಾಡು ಮೀನುಕೃಷಿ ಮಾಹಿತಿ ಶಿಬಿರ

Angara
Photo Credit :

ಬಂಟ್ವಾಳ : ಮೀನಿನ ಉತ್ಪಾದನೆ, ಮಾರುಕಟ್ಟೆ ಹಾಗೂ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಇಲಾಖೆಯೂ ನಿರಂತರ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು , ಇದರಿಂದ ಸ್ವ ಉದ್ಯೋಗ ವನ್ನು ಕಲ್ಪಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ರಾಜ್ಯ ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಸಚಿವ ಎಸ್ ಅಂಗಾರ ಹೇಳಿದರು.

ಅವರು ಒಡ್ಡೂರು ಗಂಜಿಮಠ ಒಡ್ಡೂರುಪಾರ್ಮ್ಸ್ ನಲ್ಲಿ ಮೀನುಗಾರಿಕೆ ಇಲಾಖೆ ವತಿಯಿಂದ ನಡೆದ ಒಳನಾಡು ಮೀನುಕೃಷಿ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

  ರೈತ ಈ ದೇಶದ ಬೆನ್ನೆಲುಬು ಆಗಬೇಕಾದರೆ ರೈತನಿಗೆ ನಿರಂತರವಾಗಿ ಆದಾಯ ಬರುವ ಕೆಲಸ ಆಗಬೇಕು, ದುಡಿಮೆಗೆ ಹಾಗೂ ಆದಾಯ ಬರುವ ರೀತಿಯ ವ್ಯವಸ್ಥೆ ಕಲ್ಪಿಸಬೇಕು, ಉತ್ಪಾದನೆಗೆ ಮಾರುಕಟ್ಟೆಯ ಅವಕಾಶ ನೀಡಬೇಕು, ಮಾರುಕಟ್ಟೆ ಯ ಜೊತೆ ಗುಣಮಟ್ಟವನ್ನು ಕಾಪಾಡುವ ಕೆಲಸ ಆಗಬೇಕು ಎಂದರು.

ಮೀನುಕೃಷಿ ಮಾಡುವ ರೈತರಿಗೆ ಪ್ರೋತ್ಸಾಹ ನೀಡುವ ಕೆಲಸ ಇಲಾಖೆಯಿಂದ ಆಗಬೇಕಾಗಿದೆ. ಸ್ಥಳೀಯ ವಿಶೇಷ ಔಷಧೀಯ ಗುಣಗಳನ್ನು ಹೊಂದಿರುವ ಮೀನು ತಳಿ ಸಾಕಣೆಗೆ ಪ್ರೋತ್ಸಾಹ ನೀಡುತ್ತೇವೆ ಹಾಗಾಗಿ ಮಡೆಂಜಿ ತಳಿಗೆ ಹೆಚ್ಚು ಒತ್ತು ನೀಡಬೇಕಾಗಿದೆ.ಉತ್ಪಾದನೆ ಜಾಸ್ತಿಯಾದಗೆ ಬೇಡಿಕೆ ಗಳು ಜಾಸ್ತಿಯಾಗುತ್ತದೆ. ನಿರುದ್ಯೋಗ ನಿವಾರಣೆಗಾಗಿ  ಆತ್ಮ ನಿರ್ಭರ ಭಾರತದ ಕಲ್ಪನೆಯಲ್ಲಿ ಆರ್ಥಿಕವಾಗಿ ಬಲಿಷ್ಠ ರಾಗಲು ಸ್ವ ಉದ್ಯೋಗಕ್ಕೆ ಹೆಚ್ಚಿನ ಮಹತ್ವ ನೀಡುತ್ತೇವೆ.

ಜನರ ಮನೆಯ ಬಾಗಿಲಿಗೆ ಮೀನು ತಲುಪಿಸುವ ಉದ್ದೇಶದಿಂದ  ತಂತ್ರಜ್ಞಾನದ ವ್ಯವಸ್ಥೆ ಮಾಡಲಾಗುತ್ತದೆ. ಪ್ರತೀ ತಾಲೂಕಿನಲ್ಲಿಯೂಕೋಲ್ಡ್ ಸ್ಟೋರೇಜ್ ಮಾಡುವ ವ್ಯವಸ್ಥೆ ಯನ್ನು ಕಲ್ಪಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ರೈತ ಬೆಳೆದ ಬೆಳೆಗೆ ಮಾರುಕಟ್ಟೆ ಯ ವ್ಯವಸ್ಥೆ ಆಗಬೇಕು, ಈ ನಿಟ್ಟಿನಲ್ಲಿ ಇಲಾಖೆ ಹೆಚ್ಚು ಗಮನ ಹರಿಸಿಬೇಕು.

ಕೃಷಿಗೆ ಪೂರಕವಾದ ಮಾಹಿತಿ ಮತ್ತು ಸಾಕಾಣಿಕೆ ಗೆ ಇಲಾಖೆ ಪ್ರೋತ್ಸಾಹ ನೀಡಬೇಕು.ಕೋವಿಡ್ ಮಾಹಮಾರಿಯ ಸಂದರ್ಭದಲ್ಲಿ ಜಗತ್ತಿನ ಆರ್ಥಿಕ ವ್ಯವಸ್ಥೆ ಸದೃಢ ವಾಗಿರಲು ಇಲ್ಲಿನ ಕೃಷಿ ವ್ಯವಸ್ಥೆಯಿಂದ ಮಾತ್ರ ಸಾಧ್ಯವಾಯಿತು.

ಮುಂದಿನ ಜನಾಂಗಕ್ಕೆ ಲಾಭ ಪಡೆಯಲು ಯಾವ ರೀತಿ ಮತ್ತು ಯಾವ ಕೃಷಿಯನ್ನು ಮಾಡಬೇಕು ಎಂಬ ಮಾಹಿತಿ ಯನ್ನು ನೀಡುವ ಕೆಲಸ ಇಲಾಖೆಯ ಮೂಲಕ ಆಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ , ಮೀನು ಸಾಕಣೆ ಯ ಬಗ್ಗೆ ಮಾಹಿತಿ ಕೊರತೆ ಇದ್ದು, ರೈತರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಮಾಹಿತಿ ಕಾರ್ಯಗಾರ ಆಯೋಜಿಸಲಾಗಿದ್ದು,ಕೃಷಿಕರು ಇತರ ಕೃಷಿಯ ಜೊತೆ ಮೀನು ಸಾಕಾಣೆಯಲ್ಲಿ ಸಂಪೂರ್ಣ ವಾಗಿ ತೊಡಗಿಸಿಕೊಂಡು ಹೆಚ್ಚಿನ ಲಾಭ ಪಡೆಯಲು ಮುಂದಾಗಬೇಕು ಎಂದರು.

ವೇದಿಕೆಯಲ್ಲಿ  ತೆಂಕ ಎಡಪದವು ಗ್ರಾ.ಪಂ.ಅಧ್ಯಕ್ಷ ಸುಕುಮಾರ್, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ದಿನೇಶ್ ಕುಮಾರ್, ಮಂಗಳೂರು ಮೀನುಗಾರಿಕೆ ಮಹಾ ವಿದ್ಯಾಲಯದ ಡೀನ್ ಡಾ. ಶಿವಕುಮಾರ್ ಮಗದ , ದ.ಕ‌ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ.ಟಿ.ಜೆ.ರಮೇಶ್, ರೈತ ಸಂಘದ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ, ಗೌರವಾಧ್ಯಕ್ಷ ಧನಕೀರ್ತಿ, ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ, ಗಂಜಿ ಮಠ ಗ್ರಾ.ಪಂ.ಸದಸ್ಯ  ನೋಣಯ್ಯ ಕೋಟ್ಯಾನ್, ವಿಜ್ಞಾನಿ ಪ್ರೊ.ಮಂಜಪ್ಪ ಉಪಸ್ಥಿತರಿದ್ದರು.

ಮತ್ಸ್ಯ ಆಶ್ರಯ ವಸತಿ  ಯೋಜನೆಯಡಿಯಲ್ಲಿ ಮಂಜೂರಾದ ಮನೆ ಮಂಜೂರಾತಿ ಆದೇಶ ಪತ್ರ ಹಾಗೂ ಸಹಾಯಧನವನ್ನು  ಸಚಿವವರು ಫಲಾನುಭವಿಗಳಿಗೆ ಹಸ್ತಾಂತರಿಸಿದರು. ಮೀನುಗಾರಿಕಾ ನಿರ್ದೇಶನಾಲಯದ ಅಪರ ನಿರ್ದೇಶಕ ( ಕರಾವಳಿ) ಎಂ.ಎಲ್, ದೊಡ್ಡಮಣಿ ಸ್ವಾಗತಿಸಿದರು, ಅಪರ ನಿರ್ದೇಶಕ, (ಒಳನಾಡು) ಡಿ.ತಿಪ್ಪೇಸ್ವಾಮಿ ಪ್ರಾಸ್ತಾವಿಕ ವಾಗಿ ಮಾತನಾಡಿದರು.
ಮೀನುಗಾರಿಕಾ ಜಂಟಿ ನಿರ್ದೇಶಕ ಹರೀಶ್ ಕುಮಾರ್ ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು