News Karnataka Kannada
Monday, April 29 2024
ಮಂಗಳೂರು

ಮದ್ಯ ಮಳಿಗೆ ಸ್ಥಾಪನೆಗೆ ಗ್ರಾಮಸ್ಥರ ವಿರೋಧ

Neria
Photo Credit :

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾ.ಪಂ.ವ್ಯಾಪ್ತಿಯ ಅಣಿಯೂರು ಎಂಬಲ್ಲಿ ಮದ್ಯ ಮಾರಾಟ ಮಳಿಗೆ ತೆರೆಯುವ ವಿಚಾರದಲ್ಲಿ ಮಂಗಳವಾರ ಸ್ಥಳ ಮಹಜರು ನಡೆಸಲು ಬಂದ ಅಬಕಾರಿ ಅಧಿಕಾರಿಗಳ ಬಳಿ ಗ್ರಾಮಸ್ಥರು ಯಾವುದೇ ಕಾರಣಕ್ಕೂ ಮದ್ಯದಂಗಡಿ ತೆರೆಯಲು ಅವಕಾಶ ನೀಡಬಾರದು ಎಂದು ಎಂದು ಆಗ್ರಹಿಸಿದರು.

ನೆರಿಯದ ಅಣಿಯೂರು ಸಮೀಪ ತೆರೆಯಲು ಉದ್ದೇಶಿಸಿದ ಮದ್ಯ ಮಳಿಗೆ ವಿಚಾರವಾಗಿ ಈ ಹಿಂದಿನ ಗ್ರಾ.ಪಂ. ಆಡಳಿತ ಅನುಮತಿ ನೀಡಿತ್ತೇ ಎಂಬ ವಿಷಯದಲ್ಲಿ ಗೊಂದಲ ಏರ್ಪಟ್ಟು ಈ ವಿಚಾರವಾಗಿ ಪ್ರಸಕ್ತ ಗ್ರಾಮ ಸಭೆಯಲ್ಲು ಚರ್ಚೆ ನಡೆದಿತ್ತು. ಈ ಬೆಳವಣಿಗೆ ನಡುವೆಯೇ ಮದ್ಯ ಮಳಿಗೆಗೆ ಕಟ್ಟಡ ನಿರ್ಮಿಸಲಾಗಿದ್ದರಿಂದ ಗ್ರಾಮಸ್ಥರು, ಸಂಘ-ಸಂಸ್ಥೆಗಳು ಆಕ್ರೋಶ ಹೊರಹಾಕಿ ಗ್ರಾ.ಪಂ. ಅವಕಾಶ ನೀಡದಂತೆ ಒತ್ತಡ ಹೇರಿತ್ತು. ಗ್ರಾ.ಪಂ. ಅನುಮತಿ ನಿರಾಕರಣೆಯ ನಡುವೆಯೇ ಮದ್ಯದ ಅಂಗಡಿ ತೆರೆಯಲು ಬೇಕಾದ ಪ್ರಕ್ರಿಯೆಗಳಿಗೆ ಮುಂದಾಗಿದ್ದರಿಂದ ಗ್ರಾಮಸ್ಥರು, ಸಂಘ-ಸಂಸ್ಥೆಗಳು ಜಿಲ್ಲಾಧಿಕಾರಿ ಸಹಿತ ಅಬಕಾರಿ ಆಯುಕ್ತರಿಗೆ ಆಕ್ಷೇಪಣಾ ದೂರು ನೀಡಿದ್ದರು.

ಸಾರ್ವಜನಿಕರಿಂದ, ನೆರಿಯ ಗ್ರಾ.ಪಂ. ಆಡಳಿತದಿಂದ,ವಿವಿಧ ಸಂಘ ಸಂಸ್ಥೆಯವರು ಸಲ್ಲಿಸಿದ ಆಕ್ಷೇಪದ ಅರ್ಜಿಗಳ ಬಗ್ಗೆ ಸ್ಥಳ ತನಿಖೆಗೆ ಮಂಗಳವಾರ ಆಗಮಿಸಿದ ಅಬಕಾರಿ ಜಂಟಿ ಅಧೀಕ್ಷಕರ ಮುಂದೆ ನೆರಿಯ ಗ್ರಾ.ಪಂ. ಸದಸ್ಯರಿಬ್ಬರು ಸಾರ್ವಜನಿಕರ ಆಕ್ಷೇಪದ ನಡುವೆಯೂ ಮದ್ಯದ ಮಳಿಗೆ ಬೇಕು ಎಂದು ತಿಳಿಸಿದ್ದು,ಈ ವಿಚಾರವಾಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಮಾತಿನ ಚಕಮಕಿಗೂ ಕಾರಣವಾಯಿತು. ಬಳಿಕ ಈ ವಿಚಾರವಾಗಿ ಅಧಿಕಾರಿಗಳು ಗ್ರಾಮಸ್ಥರಿಂದ ಹೇಳಿಕೆ ಪಡೆದು ತೆರಳಿದ ಘಟನೆ ನಡೆಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು