News Karnataka Kannada
Saturday, May 18 2024
ಮಂಗಳೂರು

ಮತ್ತೊಮ್ಮೆ ಕಾರಣಿಕ ಮೆರೆದ ಕಂದಾವರ ಪದವಿನ ಶ್ರೀ ಕೋಡ್ದಬ್ಬು ಮತ್ತು ರಾಹುದೈವ

Inauguration of administrative office of Federation of Bunts Associations at Mulki on April 5
Photo Credit :

ಮಂಗಳೂರು ತಾಲೂಕಿನ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಡುವ ಕಂದಾವರ ಪದವಿನ ಶ್ರೀ ಕೋಡ್ದಬ್ಬು ದೈವಸ್ಥಾನದಲ್ಲಿ ದಿನಾಂಕ 20.03.2022 ರಂದು ರಾತ್ರಿ ದುಶ್ಕರ್ಮಿಯೋರ್ವ ದೈವಸ್ಥಾನಕ್ಕೆ ಅಕ್ರಮವಾಗಿ ಪ್ರವೇಶಿಸಿ, ರಾಹು ದೈವದ ಗುಡಿಯಲ್ಲಿ ಉರಿಯುತ್ತಿದ್ದ ದೀಪವನ್ನು ನಂದಿಸಿ, ಅದನ್ನು ಕವಚಿ ಅದಕ್ಕೆ ರಕ್ತವನ್ನು ಹರಿಸಿ, ನಂತರ ದೈವಸ್ಥಾನದ ಬಲಬದಿಯಲ್ಲಿರುವ ಆಯದಕಲ್ಲಿಗೆ ರಕ್ತದ ಬಿಂದು ಹರಿಸುತ್ತಾ ಸುತ್ತು ಬಂದು ನಂತರ ಇಡೀ ಅಂಗಣದ ಸುತ್ತಲೂ ರಕ್ತದ ಬಿಂದು ಸುರಿಸಿದ್ದಾನೆ. ಬೆಳಿಗ್ಗೆ ದೈವದ ಚಾಕರಿಯವರೋರ್ವರು ದೈವಸ್ಥಾನಕ್ಕೆ ಬಂದಾಗ ಸಂಗತಿ ಬೆಳಕಿಗೆ ಬಂತು.

ಕ್ಷಣ ಮಾತ್ರದಲ್ಲಿ ಸಧ್ಭಕ್ತರು ದೈವಸ್ಥಾನದ ಅಂಗಣದಲ್ಲಿ ನೆರೆದು ಮಧ್ಯಾಹ್ನವೇ ಶ್ರೀ ಬಬ್ಬು ಸ್ವಾಮಿಯ ದರ್ಶನಕ್ಕೆ ಸಮಯ ನಿಗದಿಪಡಿಸಿ, ದರ್ಶನದ ಸಮಯದೊಳಗೆ ದುಷ್ಕರ್ಮಿ ದೈವಸ್ಥಾನಕ್ಕೆ ಬರಬೇಕೆಂದು ಪ್ರಾರ್ಥಿಸಿದರು.

ತದನಂತರ ಬಜ್ಪೆ ಠಾಣೆಗೆ ದೂರು ನೀಡಲಾಗಿ ಪೊಲೀಸರು ಅಗಮಿಸಿ, ಕೇವಲ ಒಂದುಗಂಟೆಯೊಳಗೆ ದುಷ್ಕರ್ಮಿಯನ್ನು ಬಂಧಿಸಿದರು.

ಕಳೆದ 2020 ರಲ್ಲಿ ದೈವಸ್ಥಾನವನ್ನು ಪುನರ್ ನಿರ್ಮಿಸಿ, ಪಂಚವಿಂಶತಿ ಕಲಶಾಭಿಷೇಕ ನಡೆದು ಶ್ರೀ ದೈವಗಳ ಕಾರಣಿಕ ದಿನದಿಂದ ದಿನಕ್ಕೆ ವಿಜೃಂಬಿಸುತ್ತಿದ್ದು, ಇಂದಿನ ಘಟನೆ ಶ್ರೀ ಬಬ್ಬು ಸ್ವಾಮಿ ಮತ್ತು ರಾಹುದೈವದ ಕಾರಣಿಕಕ್ಕೆ ಮತ್ತೊಂದು ಗರಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು