ಮಂಗಳೂರು : ಮಾರ್ನಮಿಕಟ್ಟೆ ನಂದಿಗುಡ್ಡೆ ಮಧ್ಯಭಾಗದಲ್ಲಿರುವ ಕೊರಗಜ್ಜ ದೈವದ ಗುಡಿ ಯಲ್ಲಿ ಮತ್ತೆ ವಿಕೃತ ಮನಸ್ಸಿನ ಕಿಡಿಗೇಡಿಗಳಿಂದ ವಿಕೃತ ಮೆರೆದಿದ್ದಾರೆ. ಶಿ ಕ್ಷೇತ್ರದ ಪಾವಿತ್ರ್ಯ ಹಾಳು ಮಾಡುವ ನಿಟ್ಟಿನಲ್ಲಿ ಕಿಡಿಗೇಡಿಗಳು ಮಗದೊಮ್ಮೆ ಕೊರಗಜ್ಜನ ಸಾನ್ನಿಧ್ಯಕ್ಕೆ ಕಾಂಡೊಮ್ ಇತ್ತು ವಿಗ್ನ ಸಂತೋಷಕ್ಕಾಗಿ ಕಾಯುತ್ತಿದ್ದಾರೆ.
ಇಂದು ಬೆಳ್ಳಂಬೆಳಿಗ್ಗೆ ದೈವಸ್ಥಾನದಲ್ಲಿ ಕಾಂಡೊಮ್ ಪತ್ತೆಯಾಗಿದ್ದು ಸಾರ್ವಜನಿಕರ ವಲಯದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದೆ. ಮಾಹಿತಿ ತಿಳಿದ ವಿಶ್ವಹಿಂದು ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಖಂಡನೆಯನ್ನು ವ್ಯಕ್ತಪಡಿಸಿದ್ದರು. ಅಲ್ಲದೆ ಆರೋಪಿಗಳನ್ನು ಶೀಘ್ರ ಬಂಧಿಸಬೇಕೆಂದು ಒತ್ತಾಯಿಸಿದರು .
ಕೊರಗಜ್ಜನ ಕಟ್ಟೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದು ಇದರ ಫೂಟೇಜನ್ನು ಪೋಲಿಸರು ಕೊಂಡೊಯ್ದಿದ್ದಾರೆ . ಕೆಲ ದಿನಗಳ ಹಿಂದೆ ಇದೇ ರೀತಿಯಾದ ಕೆಲವು ದೈವಸ್ಥಾನ ದೇವಸ್ಥಾನ ಗಳಲ್ಲಿ ಕಾಂಡೊಮ್ ಇತ್ತು ವಿಕೃತ ಮೆರೆಯುತ್ತಿದ್ದ ದುಷ್ಕರ್ಮಿಗಳು ಮಗದೊಮ್ಮೆ ಈ ಚಾಳಿಯನ್ನು ಮುಂದುವರಿಸಿದ್ದಾರೆ . ಆರೋಪಿಯನ್ನು ಶೀಘ್ರವಾಗಿ ಕೊರಗಜ್ಜ ತೋರಿಸಿಕೊಡುವ ನಿಟ್ಟಿನಲ್ಲಿ ದೈವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು.