ಮಂಗಳೂರು : ಸರ ಕಳ್ಳತನಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಸರಗಳ್ಳರನ್ನು ಬಂಧಿಸಿದ್ದಾರೆ.
ಪಾರ್ಕ್ ಮಾಡಿದ್ದ ದ್ವಿಚಕ್ರವಾಹನವನ್ನು ಕಳ್ಳತನ ಮಾಡಿ ಅದೇ ವಾಹನದಲ್ಲಿ ತೆರಳಿ ಮಹಿಳೆಯರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಎಳೆದು ಇವರು ಪರಾರಿಯಾಗುತ್ತಿದ್ದರು ಇಬ್ಬರು ಸರಗಳ್ಳರು ಮತ್ತು ಕದ್ದ ಚಿನ್ನ ಖರೀದಿ ಮಾಡಿದ ಇಬ್ಬರು ಸೇರಿ ಒಟ್ಟು ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಅರಿಫ್ , ಮೊಹಮ್ಮದ್ ಹನೀಫ್ , ಅಬ್ದುಲ್ ಸಮಾದ್ ಪಿಪಿ ಹಾಗೂ ಮೊಹಮ್ಮದ್ ರಿಯಾಜ್ ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿ ಮಹಮ್ಮದ್ ಹನೀಫ್ ಮಾರ್ಚ್ ಇಪ್ಪತ್ತ್ 6ರಂದು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಲರಾಯ್ ಎಂಬಲ್ಲಿ ಪಾರ್ಕ್ ಮಾಡಿದ್ದ 1ಆ್ಯಕ್ಸಿಸ್ ದ್ವಿಚಕ್ರ ವಾಹನ ಕಳವು ಮಾಡಿ ಅದೇ ದ್ವಿಚಕ್ರವಾಹನವನ್ನು ಉಪಯೋಗಿಸಿ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೊಲ್ಪುಗುಡ್ಡೆ ಎಂಬಲ್ಲಿ ನಡೆದುಕೊಂಡು ಹೋಗುತ್ತಿದ್ದ ವತ್ಸಲಾ ಎಂಬ ಮಹಿಳೆಯ ಕುತ್ತಿಗೆಯಲ್ಲಿದ್ದ ಸುಮಾರು ಹತ್ತು ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ದಾರಿ ಕೇಳುವ ನೆಪದಲ್ಲಿ ಸುಲಿಗೆ ಮಾಡಿದ್ದಾರೆ .
ನಂತರ ಚಿನ್ನಾಭರಣವನ್ನು ಕಾವೂರಿನ ನಕ್ಷತ್ರ ಜ್ಯುವೆಲರ್ಸ್ ಗೆ ಮಾರಾಟ ಮಾಡಿದ್ದರು ಆರೋಪಿ ಆರಿಫ್ ವಿರುದ್ಧ ಈ ಹಿಂದೆ ಸುಲಿಗೆ ಕೊಲೆ ಯತ್ನ ಮನೆ ಕಳ್ಳತನ ಸೇರಿ 18 ಪ್ರಕರಣ ಹಾಗೂ ಮೊಹಮ್ಮದ್ ಹನೀಫ್ ವಿರುದ್ಧ 1ಸುಲಿಗೆ ಪ್ರಕರಣ ದಾಖಲಾಗಿತ್ತು.
ಬಂಧಿತ ಆರೋಪಿಗಳಿಂದ ಎಂಬತ್ತು ಸಾವಿರ ಮೌಲ್ಯದ ಹದಿನೆಂಟು ಗ್ರಾಂ ಚಿನ್ನದ ಮಾಂಗಲ್ಯ ಸರ ಹಾಗೂ ಕೃತ್ಯಕ್ಕೆ ಉಪಯೋಗಿಸಿದ 2ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ